ಪಾಲ್ತಾಡಿ: ಅಪಾಯಕಾರಿ ಪಾಲದ ನಡಿಗೆಗೆ ಮುಕ್ತಿ ಯಾವಾಗ?

0

ಸವಣೂರು : ಮಳೆಗಾಲ ಆರಂಭವಾಗಿದೆ.ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.ಭಾರೀ ಮಳೆ ಬಂದರೆ ಇಲ್ಲಿನ ಜನತೆಗೆ ಭಯದ ವಾತಾವರಣ. ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಗಾಣದಕೊಟ್ಯ(ಹೊಸಮನೆ) ಎಂಬಲ್ಲಿರುವ ಕಿಂಡಿ ಅಣೆಕಟ್ಟು ಸಹಿತ ಪಾಲವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಪಾಲವನ್ನು ಬಳಸಿಕೊಂಡು ಹಲವು ಮಂದಿ ದಿನನಿತ್ಯ ಸಾಗುತ್ತಿದ್ದಾರೆ.ಆದರೆ ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ. ಈ ಪಾಲದ ಮೂಲಕ ಪಾಲ್ತಾಡಿ ಶಾಲೆ, ಚಾಕೋಟೆತ್ತಡಿ ದೈವಸ್ಥಾನ, ಬೊಳಿಯಾಲ, ಪಾಲ್ತಾಡಿ ಗುತ್ತಿನಮನೆ, ಮುಖ್ಯ ರಸ್ತೆ ಮಾಡಾವಿಗೆ ಹೋಗುವವರು ಇದನ್ನೇ ಬಳಸಿಕೊಂಡು ಹೋಗುತ್ತಿದ್ದಾರೆ.ನಿತ್ಯ ಈ ಪಾಲದ ಮೂಲಕ ಹಲವು ಮಂದಿ ಹೋಗುತ್ತಿದ್ದು ಪರ್ಯಾಯ ವ್ಯವಸ್ಥೆಯಿಲ್ಲದೆ ಭಯದಲ್ಲೇ ಸಾಗುವಂತಾಗಿದೆ. ಈ ಕಿಂಡಿ ಅಣೆಕಟ್ಟು ಪಾಲಕ್ಕೆ ನಿರ್ಮಿಸಿದ ತಡೆಗೋಡೆಯು ಭಾಗಶಃ ಕುಸಿದಿದ್ದು,ಈ ಭಾಗದ ಜನತೆಯ ಕೃಷಿ ತೋಟವೂ ನೀರುಪಾಲಾಗುವ ಆತಂಕ ಶುರುವಾಗಿದೆ. ಕೂಡಲೇ ಸಂಬಂಧಪಟ್ಟವರು ಈ ಕುರಿತು ಗಮನಹರಿಸಬೇಕಾಗಿ ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here