ಕೆಮ್ಮಾಯಿಯಲ್ಲಿ ಬೈಕ್ ಭೀಕರ ಅಪಘಾತ – ಬೈಕ್‌ ಸವಾರ ಮೃತ್ಯು

0

ಪುತ್ತೂರು:ಜು.23ರಂದು ರಾತ್ರಿ ಪುತ್ತೂರು-ಉಪ್ಪಿನಂಗಡಿ ರಸ್ತೆ ಕೆಮ್ಮಾಯಿಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಬೈಕ್ ಸವಾರ ಯುವಕ ಮೃತಪಟ್ಟ ಘಟನೆ ನಡೆದಿದೆ.
ಬನ್ನೂರು ಗ್ರಾಮದ ಸೇಡಿಯಾಪು ಅಡೆಂಚಿಲಡ್ಕ ದಿ.ರವಿ ಎಂಬವರ ಪುತ್ರ, ಸೇಡಿಯಾಪಿನ ಹೊಟೇಲ್ ಒಂದರ ಚರಣ್ ಮೃತಪಟ್ಟವರು.ಪುತ್ತೂರು ಕಡೆಯಿಂದ ಸೇಡಿಯಾಪು ಕಡೆ ಚರಣ್ ಅವರು ಚಲಾಯಿಸುತ್ತಿದ್ದ ಬೈಕ್ ಕೆಮ್ಮಾಯಿಯಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಡಿವೈಡರ್ ಏರಿದ್ದು,ಸವಾರ ಚರಣ್ ಅವರು ಡಿವೈಡರ್ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದರು.ತಕ್ಷಣ ಸ್ಥಳದಲ್ಲಿದ್ದವರು ಸೇರಿಕೊಂಡು ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.ಮೃತರು ತಾಯಿ ಮಂಜುಳ ಮತ್ತು ಸಹೊದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here