ಆನಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರ ಎಲ್ಲಾ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ

0

ಅಧ್ಯಕ್ಷರಾಗಿ ಶಾಂತಾರಾಮ ರೈ ನೀರ್ಪಾಡಿ, ಉಪಾಧ್ಯಕ್ಷರಾಗಿ ನಿರ್ಮಲ ನೀರ್ಪಾಡಿ ಆಯ್ಕೆ.

ನಿಡ್ಪಳ್ಳಿ; ಇಲ್ಲಿಯ ಆನಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಗೆ  ನಿರ್ದೇಶಕರಾಗಿ ಎಲ್ಲಾ ಹದಿಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರತಿ ಸ್ಥಾನಕ್ಕೆ ತಲಾ ಒಂದೊಂದು ಉಮೇದುವಾರರು ನಾಮ ಪತ್ರ ಸಲ್ಲಿಸಿದ ಕಾರಣ ಚುನಾವಣೆ ನಡೆಯದೆ ಎಲ್ಲಾ ಸ್ಥಾನಗಳಿಗೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ಘೋಷಿಸಿದರು.

ನಿರ್ದೇಶಕರಾಗಿ ಆಯ್ಕೆಯಾದವರು ;
ತಿಮ್ಮಣ್ಣ ರೈ ಆನಾಜೆ, ಬಾಲಚಂದ್ರ ರೈ ಆನಾಜೆ, ಯತಿರಾಜ ರೈ ಆನಾಜೆ, ಶಾಂತಾರಾಮ ರೈ ನೀರ್ಪಾಡಿ, ನಿರ್ಮಲ ನೀರ್ಪಾಡಿ, ಬಾಲಕೃಷ್ಣ ರೈ ಆನಾಜೆ, ಗಂಗಾಧರ ರೈ ಆನಾಜೆ, ಪ್ರಮೋದ್ ಕುಮಾರ್ ರೈ ಸೇರ್ತಾಜೆ,   ಜಯಶ್ರೀ ರೈ ನೀರುಕ್ಕು, ಲೀಲಾವತಿ ಅರ್ತಿಮೂಲೆ, ರಮೇಶ ಆನಾಜೆ, ವಿಠಲ ಪೂಜಾರಿ ಅಜಲಡ್ಕ, ಕುಸುಮಾವತಿ ನೀರ್ಪಾಡಿ.

ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಜು.11 ರಂದು ಸಂಘದ ಆವರಣದಲ್ಲಿ ನಡೆಯಿತು.ಅಧ್ಯಕ್ಷರಾಗಿ ಶಾಂತಾರಾಮ ರೈ ನೀರ್ಪಾಡಿ ಹಾಗೂ ಉಪಾಧ್ಯಕ್ಷರಾಗಿ ನೀರ್ಮಲ ಜಿ.ಗೌಡ ನೀರ್ಪಾಡಿ ಅವಿರೋಧವಾಗಿ ಆಯ್ಕೆಯಾದರು.

ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್ ರವರ ನೇತೃತ್ವದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಸಂಘದ  ಕಾರ್ಯದರ್ಶಿ ಗೋಪಾಲಕೃಷ್ಣ  ರೈ  ಸಹಕರಿಸಿದರು.

LEAVE A REPLY

Please enter your comment!
Please enter your name here