ಶಾಂತಿಗೋಡು: ಮರದಿಂದ ಬಿದ್ದು ಮೃತಪಟ್ಟ ಹರೀಶ್ ಕುಟುಂಬಕ್ಕೆ ರೂ.1 ಲಕ್ಷ ವಿಮಾ ಪರಿಹಾರ ಚೆಕ್ ವಿತರಣೆ 

0

ಪುತ್ತೂರು: ಶಾಂತಿಗೋಡು ಗ್ರಾಮದ ಮರಕ್ಕೂರಿನ ಮಂಜುಶ್ರೀ ನವೋದಯ ಗುಂಪಿನ ಸದಸ್ಯರಾಗಿದ್ದ ಹರೀಶ್ ಎಂಬವರು ಮರದಿಂದ ಬಿದ್ದು ಮೃತರಾಗಿದ್ದು, ನವೋದಯ ಗ್ರಾಮವಿಕಾಸ ಚಾರೀಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ಚೈತನ್ಯವಿಮಾ ಯೋಜನೆ ಮುಖಾಂತರ ಅಪಘಾತ ಮರಣ ವಿಮಾ ಪರಿಹಾರ ವಾಗಿ ರೂ.1ಲಕ್ಷ ರೂಪಾಯಿಯ ಚೆಕ್ಕನ್ನು ಮೃತರ ಪತ್ನಿಗೆ ಡಿಸಿಸಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ವಿತರಿಸಿದರು.

ಡಿಸಿಸಿ ಬ್ಯಾಂಕ್ ಮುಖ್ಯ ಶಾಖೆ ಪುತ್ತೂರು ಇದರ ಶಾಖಾ ವ್ಯವಸ್ಥಾಪಕ ಹರೀಶ್ ಕುಮಾರ್, ನರಿಮೊಗರು ಸಿ ಎ ಬ್ಯಾಂಕಿನ ಕಾರ್ಯನಿರ್ವಾಹಣಾಧಿಕಾರಿ ಮಧುಕರ್ ಎಚ್, ಪುತ್ತೂರು ತಾಲೂಕು ನವೋದಯ ಮೇಲ್ವಾಚಾರಕ ಚಂದ್ರಶೇಖರ್ ಹಾಗೂ ನರಿಮೊಗರು ವಲಯದ ಪ್ರೇರಕ ಕುಸುಮಾವತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here