ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು-ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು : ಮರಾಟಿ ಸಮಾಜ ಸೇವಾ ಸಂಘ ,ಕೊಂಬೆಟ್ಟು ಇದರ 2023-24 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆಯೂ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ನಾಯ್ಕ ನೇತೃತ್ವದಲ್ಲಿ ಜು.23 ರಂದು ಸಂಘದ ಸಭಾಭವನದಲ್ಲಿ ನಡೆಯಿತು.


ಅಧ್ಯಕ್ಷರಾಗಿ ಮಂಜುನಾಥ ನಾಯ್ಕ ಎನ್‌ ಎಸ್ , ಉಪಾಧ್ಯಕ್ಷರಾಗಿ ದುಗ್ಗಪ್ಪ ಎನ್ ನಾಯ್ಕ ಬಡಾವು, ಕಾರ್ಯದರ್ಶಿಯಾಗಿ ಅಶೋಕ್ ಬಲ್ನಾಡು, ಖಜಾಂಚಿ ಬಾಬು ನಾಯ್ಕ ತೆಂಕಿಲ, ಸಹ ಕಾರ್ಯದರ್ಶಿ ಗಿರೀಶ್ ಸೊರಕೆ ಹಾಗೂ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಯಮುನಾ ಪಟ್ಟೆ , ಪರಮೇಶ್ವರ್ ಪಂಗಳಾಯಿ, ನ್ಯಾಯವಾದಿ ಉಮೇಶ್ ದಾಸರಮೂಲೆ,ಶೀನಪ್ಪ ನಾಯ್ಕ ಕುಂತೂರು ಇವರುಗಳು ಸರ್ವಾನುಮತದಿಂದ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಆಯ್ಕೆ ಪ್ರಕ್ರಿಯೆ ನಡೆಯಿತು. ನಿವೃತ್ತ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯ್ಕ ಆಯ್ಕೆ ಪ್ರಕ್ರಿಯೆ ಯನ್ನು ನಡೆಸಿಕೊಟ್ಟರು.

ನೋಟರಿ ವಕೀಲರಾಗಿರುವ ಮಂಜುನಾಥ್ ನಾಯ್ಕ , ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲದ ಉಪಾಧ್ಯಕ್ಷರಾಗಿ,ಲ್ಯಾಂಪ್ಸ್ ಸಹಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ,
ಕಾರ್ಯದರ್ಶಿ ಅಶೋಕ್ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ , ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ನಿರ್ದೇಶಕ, ಬಲ್ನಾಡು ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಖಜಾಂಚಿಯಾಗಿ ಬಾಬು ನಾಯ್ಕ ಭಾರತೀಯ ಜೀವ ವಿಮಾ ನಿಗಮ ಇದರ ನಿವೃತ್ತ ಉದ್ಯೋಗಿ.

LEAVE A REPLY

Please enter your comment!
Please enter your name here