ಕಾಣಿಯೂರು ಉಜ್ವಲ ಸಂಜೀವಿನಿ ಒಕ್ಕೂಟದಿಂದ ಪೌಷ್ಠಿಕ ಆಹಾರ ಆರೋಗ್ಯ ನೀರು, ನೈರ್ಮಲ್ಯ ಮಾಹಿತಿ

0

ಕಾಣಿಯೂರು: ಉಜ್ವಲ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ಕಾಣಿಯೂರು ಇದರ ವತಿಯಿಂದ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಆರೋಗ್ಯ ನೀರು ಮತ್ತು ನೈರ್ಮಲ್ಯ ಇದರ ತರಬೇತಿ ಕಾರ್ಯಕ್ರಮ ನಡೆಯಿತು. ಕಾಣಿಯೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಾಜಿದಾ ಹಾಗೂ ಬರೆಪ್ಪಾಡಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆರೋಗ್ಯ ಅಧಿಕಾರಿ ಜೆಲ್ಸಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಸುವಿನಾ, ಒಕ್ಕೂಟದ ಅಧ್ಯಕ್ಷೆ ಸುಚಿತ್ರಾ ಕಟ್ಟತ್ತಾರು, ಎಂಬಿಕೆ ಸುಮನಾ, ಎಲ್ ಸಿ ಆರ್ ಪಿ ಚಂದ್ರಿಕಾ, ಕೋಮಲಾಂಗಿ, ಪಶು ಸಕಿ ಲೀಲಾವತಿ, ಬಿ ಆರ್ ಪಿ ಜಯಂತಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here