ಇಚ್ಲಂಪಾಡಿ: ಮತ್ತೆ ಕಾಡಾನೆ ದಾಳಿ, ಕೃಷಿ ನಾಶ

0

ನೆಲ್ಯಾಡಿ: ಎರಡು ದಿನದ ಹಿಂದೆ ಇಚ್ಲಂಪಾಡಿ ಗ್ರಾಮದ ಬಿಜೇರು ಭಾಗದಲ್ಲಿ ದಾಳಿ ನಡೆಸಿದ್ದ ಕಾಡಾನೆ ಜು.29ರಂದು ರಾತ್ರಿ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ದಾಳಿ ನಡೆಸಿ ಕೃಷಿ ನಾಶಗೊಳಿಸಿವೆ.
ಇಚ್ಲಂಪಾಡಿ ಗ್ರಾಮ ಕೊರಮೇರು ನಿವಾಸಿ ಕೆ.ರಮೇಶ್ ಗೌಡ, ಕುಶಾಲಪ್ಪ ಗೌಡ ದೇಸಾಲು, ಹೊನ್ನಪ್ಪ ಗೌಡ ದೇಸಾಲು ಅವರ ತೋಟಕ್ಕೆ ದಾಳಿ ನಡೆಸಿರುವ ಕಾಡಾನೆ ಅಡಿಕೆ ಗಿಡ, ಬಾಳೆ ಗಿಡಗಳನ್ನು ಹಾನಿಗೊಳಿಸಿವೆ. ಇದರಿಂದ ಅವರಿಗೆ ಸಾವಿರಾರು ರೂ.ನಷ್ಟ ಸಂಭವಿಸಿದೆ. ಅರಣ್ಯ ಭಾಗದಲ್ಲಿರುವ ಇಚ್ಲಂಪಾಡಿ ಗ್ರಾಮದಲ್ಲಿ ಪದೇ ಪದೇ ಆನೆ ದಾಳಿ ನಡೆಯುತ್ತಿದ್ದು, ಅಪಾರ ಕೃಷಿ ಹಾನಿಯಾಗುತ್ತಿದೆ. ಗ್ರಾಮಸ್ಥರೂ ಆನೆ ದಾಳಿಗೆ ತೀವ್ರ ಆತಂಕಿತರಾಗಿದ್ದು ಕಾಡಾನೆಗಳ ಸ್ಥಳಾಂತರಕ್ಕೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here