ಮೊಬೈಲ್‌ಗೆ ಬಂದ ಲಿಂಕ್ ಮೂಲಕ ಲಾಗಿನ್ ವೇಳೆ ಉಳಿತಾಯ ಖಾತೆಯಲ್ಲಿದ್ದ ಹಣ ಕಡಿತ-ದೂರು

0

ಪುತ್ತೂರು: ಬ್ಯಾಂಕ್ ಖಾತೆ ಬ್ಲಾಕ್ ಮಾಡಲಾಗಿದೆ ಎಂದು ಬಂದ ಲಿಂಕ್ ಮೂಲಕ ಇಂಟರ್‌ನೆಟ್ ಬ್ಯಾಂಕಿಂಗ್ ಲಾಗಿನ್ ಆದ ವೇಳೆ ಉಳಿತಾಯ ಖಾತೆಯಲ್ಲಿದ್ದ 24,998 ರೂ.ಕಡಿತಗೊಂಡಿರುವ ಬಗ್ಗೆ ಉಪ್ಪಿನಂಗಡಿ ಶ್ರೀಕಾಂತ ಸದನ ಮನೆಯ ಮೋಹನ ಕುಮಾರ ಕೆ.ಎಸ್.(38ವ.)ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜು.28ರಂದು ಸಂಜೆ 5 ಗಂಟೆಗೆ ಮೋಹನ ಕುಮಾರ ಅವರ ಮೊಬೈಲ್ ಪೋನ್‌ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ನಿಮ್ಮ ಎಸ್‌ಬಿಐ ಉಳಿತಾಯ ಖಾತೆಯನ್ನು ಬ್ಲಾಕ್ ಮಾಡಲಾಗಿದೆ ಎಂದು ಲಿಂಕ್ ಬಂದಿದೆ. ಮೋಹನ ಕುಮಾರ್ ಅವರು ಆ ಲಿಂಕ್ ಮೂಲಕ ಇಂಟರ್ ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆದ ಸಂದರ್ಭ ಅವರ ಉಳಿತಾಯ ಖಾತೆಯಲ್ಲಿದ್ದ 24,998 ರೂ. ಕಡಿತಗೊಂಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೋಹನ ಕುಮಾರ್ ಅವರು ನೀಡಿದ ದೂರಿನಂತೆ ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here