ರೋಟರಿ ಕ್ಲಬ್ ಪುತ್ತೂರುನಿಂದ ಬಿರುಮಲೆ ಬೆಟ್ಟದಲ್ಲಿ ವನಮಹೋತ್ಸವ- ಸ್ವಚ್ಛತಾ ಅಭಿಯಾನ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರುನಿಂದ ಬಿರುಮಲೆ ಬೆಟ್ಟದಲ್ಲಿ ಜು.29 ರಂದು ವನಮಹೋತ್ಸವ ಹಾಗೂ ಸ್ವಚ್ಛತಾ ಅಭಿಯಾನ ಜರಗಿತು.
ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಜಿತ್ ರೈ, ಮಾಜಿ ಅಧ್ಯಕ್ಷ ವಾಮನ್ ಪೈ, ಮಧು ನರಿಯೂರು, ರೋಟರ್ಯಾಕ್ಟ್ ಪುತ್ತೂರು ಕ್ಲಬ್ ಸ್ವರ್ಣ ಚೇರ್ ಮ್ಯಾನ್ ರಾಜಗೋಪಾಲ್, ಸದಸ್ಯರಾದ ಶ್ರೀಧರ್ ಕಣಜಾಲು, ಪ್ರೇಮಾನಂದ, ರೋಟರ್ಯಾಕ್ಟ್ ಪುತ್ತೂರು ಕ್ಲಬ್ ಸ್ವರ್ಣ ಅಧ್ಯಕ್ಷೆ ಹರ್ಷಿತಾ, ಕಾರ್ಯದರ್ಶಿ ಅಭಿ ಚೈತ್ರ, ಸದಸ್ಯರಾದ ಅನಿತಾ, ಹರ್ಷಿತಾ ಬಿ.ಟಿ, ಲಿಖಿತ ಮತ್ತಿತರರು ಜೊತೆಗೂಡಿ ಬಿರುಮಲೆ ಬೆಟ್ಟ ಪರಿಸರದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಜೊತೆಗೆ ಬಿರುಮಲೆ ಬೆಟ್ಟ ಪರಿಸರದಲ್ಲಿನ ಗಿಡಗಂಟಿಗಳನ್ನು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.

LEAVE A REPLY

Please enter your comment!
Please enter your name here