ಮುರ ಬನಾರಿ ನಿವಾಸಿ ಶೈಲೇಶ್ ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿ

0

ಪುತ್ತೂರು: ಮುರ ಬನಾರಿ ನಿವಾಸಿಯೋರ್ವರು ಬೆಂಗಳೂರಿನಲ್ಲಿ ಅಪಘಾತಕ್ಕೆ ಬಲಿಯಾಗಿರುವ ಘಟನೆ ವರದಿಯಾಗಿದೆ.

ಮುರ ಬನಾರಿ ನಿವಾಸಿ ಶಶಿ ಶ್ರೀನಿವಾಸ್‌ರವರ ಪುತ್ರ ಶೈಲೇಶ್ (48 ವ.)ಮೃತಪಟ್ಟವರು. ಬೆಂಗಳೂರುನಲ್ಲಿ ಉದ್ಯಮಿಯಾಗಿದ್ದ ಅವರು ರಾಜಾಜಿನಗರದಲ್ಲಿ ಮನೆಮಾಡಿಕೊಂಡು ವಾಸವಿದ್ದರು. ಜು.25 ರಂದು ಅವರ ಬೈಕ್ ಮತ್ತು ಕಾರೊಂದರ ನಡುವೆ ಅಪಘಾತ ಸಂಭವಿಸಿತ್ತು. ಇದರಿಂದಾಗಿ ಕೋಮಾ ಸ್ಥಿತಿಯಲ್ಲಿ ಬೆಂಗಳೂರು ನಂದಿನಿ ಲೇ ಔಟ್ ಕಣ್ವಶ್ರೀ ಸಾಯಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆಯಲ್ಲಿದ್ದ ಶೈಲೇಶ್‌ರವರು ಜು.31 ರಂದು ನಿಧನರಾದರು. ಮೃತರು ತಾಯಿ ಶಶಿ ಶ್ರೀನಿವಾಸ್, ಪತ್ನಿ ಸೋನು, ಪುತ್ರಿ ಸಾಕ್ಷಿ, ಸಹೋದರ ರಾಜೇಶ್‌ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here