ನೆಕ್ಕಿಲು:ಭಾರೀ ಗಾಳಿಗೆ ನೆಲಕ್ಕುರುಳಿದ 50ರಷ್ಟು ಅಡಿಕೆ ಮರಗಳು-ಅಪಾರ ನಷ್ಟ

0

ಪುತ್ತೂರು: ಆ.1ರಂದು ಮಧ್ಯ ರಾತ್ರಿ ವೇಳೆ ಬೀಸಿದ ಭಾರೀ ಗಾಳಿಗೆ ಸರ್ವೆ ಗ್ರಾಮದ ನೆಕ್ಕಿಲು ಎಂಬಲ್ಲಿ ಭಾಸ್ಕರ ಬಲ್ಯಾಯ ಎಂಬವರಿಗೆ ಸೇರಿದ ತೋಟದಲ್ಲಿ ಸುಮಾರು 50ರಷ್ಟು ಅಡಿಕೆ ಮರಗಳು ನೆಲಕ್ಕುರುಳಿದಿರುವ ಬಗ್ಗೆ ವರದಿಯಾಗಿದೆ. ಅಲ್ಲದೇ ಬೃಹದಾಕಾರದ ಮರ ಮತ್ತು ಬಾಳೆಗಿಡಗಳು ಕೂಡಾ ನೆಲಕ್ಕುರುಳಿದಿದೆ. ಘಟನೆಯಿಂದ ಭಾರೀ ನಷ್ಟವುಂಟಾಗಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕೆ ಮುಂಡೂರು ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ ಹಾಗೂ ಗ್ರಾಮ ಸಹಾಯಕ ಹರ್ಷಿತ್ ನೇರೊಳ್ತಡ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here