ಪುತ್ತೂರು: ಹಳೆ ಪ್ರಕರಣದ ಆರೋಪಿಯ ಸೆರೆ

0

ಪುತ್ತೂರು:9 ವರ್ಷಗಳ ಹಿಂದೆ ನಡೆದಿದ್ದ ಅಪರಾಧ ಪ್ರಕರಣವೊಂದರ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಜಾರ್ಖಂಡ್ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಾರ್ಖಂಡ್ ರಾಜ್ಯದ ಗಾಲೋಡಿಯಾ ಗ್ರಾಮದ ಕೃಷ್ಣಪ್ರಸಾದ್ ಗುಪ್ತ ಎಂಬವರ ಮಗ ಸತೀಶ್ ಗುಪ್ತ ಯಾನೆ ಮಹೋರಿ(33.ವ)2014ರಲ್ಲಿ ಮಾಡ್ನೂರುನಲ್ಲಿ ನಡೆದ ಅಪರಾಧ ಪ್ರಕರಣವೊಂದರ ಆರೋಪಿಯಾಗಿದ್ದ. ವಿಚಾರಣೆಗೆ ಹಾಜರಾಗದೆ ಇದ್ದ ಆತನ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ವೃತ್ತ ನಿರೀಕ್ಷಕ ರವಿ ಬಿ.ಎಸ್.ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ಧನಂಜಯ ಬಿ.ಸಿ,ಸುಬ್ರಹ್ಮಣ್ಯ ಎಚ್.ಹಾಗೂ ಸಿಬ್ಬಂದಿಗಳಾದ ಹೆಡ್‌ಕಾನ್‌ಸ್ಟೇಬಲ್‌ಗಳಾದ ಮಧು ಕೆ.,ಹರೀಶ್ ಮತ್ತು ಕಾನ್‌ಸ್ಟೇಬಲ್ ಮುನಿಯ ನಾಯ್ಕರವರನ್ನೊಳಗೊಂಡ ತಂಡ ಮಂಗಳೂರು ಗ್ರಾಮಾಂತರ ವಾಮಂಜೂರು ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

LEAVE A REPLY

Please enter your comment!
Please enter your name here