ಕೆಮ್ಮಾರ ಶಾಲೆಯ ಗೌರವ ಶಿಕ್ಷಕಿ ಅಝ್ಮಿಯಾಗೆ ಬೀಳ್ಕೊಡುಗೆ

0

ಉಪ್ಪಿನಂಗಡಿ: ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲ ಸಮಯದಿಂದ ಗೌರವ ಶಿಕ್ಷಕಿಯಾಗಿ ಉಚಿತವಾಗಿ ಸೇವೆ ಮಾಡಿದ, ಶಾಲೆಯ ಹಳೆ ವಿದ್ಯಾರ್ಥಿನಿಯೂ ಆದ ಕುಮಾರಿ ಅಝ್ಮಿಯಾರವರಿಗೆ ಬೀಳ್ಕೊಡುಗೆ ಸಮಾರಂಭ ಶಾಲೆಯಲ್ಲಿ ನಡೆಯಿತು.
ಅಝ್ಮೀಯಾ ಅವರು ಉನ್ನತ ಶಿಕ್ಷಣಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಶಾಲಾ ಮುಖ್ಯಶಿಕ್ಷಕಿ ಜಯಶ್ರೀ ಎಮ್.,ಮಾತನಾಡಿ, ತಾನು ಕಲಿತ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಮಕ್ಕಳಿಗೆ ಉಚಿತವಾಗಿ ಸೇವೆ ನೀಡಿದ ಅಝ್ಮಿಯಾರವರ ಕಾರ್ಯ ಶ್ಲಾಘನೀಯ. ಅವರ ಮುಂದಿನ ಕಲಿಕಾ ಭವಿಷ್ಯವು ಉಜ್ವಲವಾಗಲಿ ಎಂದು ಹೇಳಿ ಶುಭ ಹಾರೈಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ.ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃಧ್ದಿ ಸಮಿತಿ ಉಪಾದ್ಯಕ್ಷೆ ತೇಜಾವತಿ, ಸದಸ್ಯ ಪದ್ಮನಾಭ ಶೆಟ್ಟಿ, ಶಿಕ್ಷಕ ವೆಂಕಟರಮಣ ಭಟ್, ದೈಹಿಕ ಶಿಕ್ಷಣ ಶಿಕ್ಷಕಿ ಮೋಹನಾಂಗಿ, ಲೀನಾ ಲಸ್ರಾಡೊ, ಸಂಧ್ಯಾ, ಜುನೈದ್, ಮೆಹನಾಝ್, ದಿವ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here