![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಆಲಂಕಾರು: ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ವಿದ್ಯಾಭಾರತಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 14ನೇ ವಯೋಮಾನದ ವಿಭಾಗದಲ್ಲಿ ಶ್ರೀ ಭಾರತಿ ವಿದ್ಯಾಸಂಸ್ಥೆಯ ಬಾಲಕಿಯರ ಕಬ್ಬಡ್ಡಿ ತಂಡ ಪ್ರಥಮ ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಒಟ್ಟು ವಿವಿಧ ಕಡೆಗಳಿಂದ 8 ಕಬಡ್ಡಿ ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾಟದಲ್ಲಿ ಆಲಂಕಾರು ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಅಂತಿಮ ಸುತ್ತಿನಲ್ಲಿ ಜ್ಞಾನದೀಪ ಶಾಲೆ ಎಳಿಮಲೆಯನ್ನು ಜಿದ್ದಾ ಜಿದ್ದಿನ ಹೋರಾಟದಲ್ಲಿ ಮಣಿಸಿ ವಿದ್ಯಾ ಭಾರತಿಯ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶಕ್ತಿ ವಿದ್ಯಾ ಸಂಸ್ಥೆಗಳು ಶಕ್ತಿ ನಗರ, ಮಂಗಳೂರು, ಇವುಗಳ ಸಹಯೋಗದಲ್ಲಿ ಶಕ್ತಿ ವಿದ್ಯಾ ಸಂಸ್ಥೆ, ಶಕ್ತಿನಗರ ಮಂಗಳೂರುನಲ್ಲಿ ಸ್ಪರ್ಧೆ ನಡೆದಿದೆ.
![](https://puttur.suddinews.com/wp-content/uploads/2023/08/cae73e22-4f5e-4ff4-9cf7-c79e77899c3b.jpg)