ಕೊಕ್ಕಡ: ಕೃಷಿ ಇಲಾಖೆ ಕಟ್ಟಡದ ಕಿಟಕಿಗಳಿಗೆ ಹಾನಿ

0

ನೆಲ್ಯಾಡಿ: ಕೊಕ್ಕಡದಲ್ಲಿರುವ ಕೊಕ್ಕಡ ಹೋಬಳಿ ಕೃಷಿ ಇಲಾಖೆ ಕಟ್ಟಡಕ್ಕೆ ಹಾನಿಗೊಳಿಸಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿ ಚಿದಾನಂದ ಹೂಗಾರ್ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.


ಕಟ್ಟಡದ ಕಿಟಕಿಗಳ ಗಾಜುಗಳಿಗೆ ಕಲ್ಲು ಹೊಡೆದಿದ್ದು, ಕಟ್ಟಡದ ಹೊರಗಡೆ ಹಾಕಿದ್ದ ವಿದ್ಯುತ್ ಬಲ್ಬುಗಳನ್ನು ಧ್ವಂಸಗೊಳಿಸಲಾಗಿದೆ. ಆ.1ರಂದು ರಾತ್ರಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದೆ. ವರ್ಷದ ಹಿಂದೆಯೂ ಇಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ಎಸೆದಿದ್ದು ಆ ಸಮಯದಲ್ಲಿ ಕೃಷಿ ಅಧಿಕಾರಿಯವರು ಗ್ರಾಮ ಪಂಚಾಯತ್ ಹಾಗೂ ಬೀಟ್ ಪೊಲೀಸರಿಗೆ ಮೌಖಿಕ ದೂರು ನೀಡಿದ್ದರು. ಇದೀಗ ವರ್ಷದ ಬಳಿಕ ದುಷ್ಕೃತ್ಯ ಮರುಕಳಿಸಿದೆ. ಕೃಷಿ ಇಲಾಖೆ ಕಟ್ಟಡಕ್ಕೆ ಹಾಗೂ ಇಲ್ಲಿ ಇರುವ ಹೋಬಳಿ ಮಟ್ಟದ ಸರಕಾರಿ ಕಚೇರಿಗಳಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here