ಅಮ್ಚಿನಡ್ಕ ಮನೆಯಿಂದ ಒಣ ಅಡಿಕೆ,ಹುಲ್ಲು ತೆಗೆಯುವ ಮೆಷಿನ್ ಕಳವು

0

ಪುತ್ತೂರು:ಅಮ್ಚಿನಡ್ಕದಲ್ಲಿ ಮನೆಯಂಗಳದ ಉಗ್ರಾಣದಿಂದ ಒಣ ಅಡಿಕೆ ಮತ್ತು ಹುಲ್ಲು ತೆಗೆಯುವ ಮೆಷಿನ್ ಕಳವಾಗಿರುವ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಲಾಗಿದೆ.

ಮಾಡ್ನೂರು ಗ್ರಾಮದ ಅಮ್ಚಿನಡ್ಕ ಭಾರವಿ ಮನೆ ದಿ.ವೆಂಕಟಕೃಷ್ಣ ಕಲ್ಲೂರಾಯ ಎಂಬವರ ಮಗ ವಿಷ್ಣು ಕಲ್ಲುರಾಯ ಪಿ.ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.ತಾನು 04 ಎಕ್ರೆ ಅಡಿಕೆ ತೋಟವನ್ನು ಹೊಂದಿದ್ದು ಜು.19ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ಮಗನ ಮನೆಗೆ ಪುತ್ತೂರಿಗೆ ಹೋಗಿ ಮರಳಿ ಆ.03ರಂದು ಬೆಳಿಗ್ಗೆ 9 ಗಂಟೆಗೆ ಅಮ್ಚಿನಡ್ಕ ಮನೆಗೆ ಬಂದಾಗ, ಮನೆಯ ಅಂಗಳದ ಉಗ್ರಾಣದಲ್ಲಿದ್ದ, 10 ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಇರಿಸಿದ್ದ ಸುಮಾರು 02 ಕ್ವಿಂಟಾಲ್ ಒಣ ಅಡಿಕೆ ಮತ್ತು ಹುಲ್ಲು ತೆಗೆಯುವ ಮೆಷಿನ್ ಕಾಣಿಯಾಗಿತ್ತು.ಈ ಬಗ್ಗೆ ನಮ್ಮ ತೋಟವನ್ನು ನೋಡಿಕೊಳ್ಳುತ್ತಿದ್ದ ನಾರಾಯಣ ಮೂಲ್ಯ ಹಾಗೂ ಶಿವಪ್ರಸಾದ ಭಟ್ ಕೊಚ್ಚಿ ಅವರಲ್ಲಿ ವಿಚಾರಿಸಿದಾಗ ಅವರು, ನಾನು ಹೋದ ಬಳಿಕ ತಮ್ಮ ಅಂಗಳಕ್ಕೆ ಬಂದಿರುವುದಿಲ್ಲ ಎಂದು ತಿಳಿಸಿದ್ದರು.ತಾನು ಇಲ್ಲದ ವೇಳೆ ಯಾರೋ ಕಳ್ಳರು ಇದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಕಳವಾದ ಅಡಿಕೆಯ ಅಂದಾಜು ಮೌಲ್ಯ 70 ರೂ. ಹಾಗೂ ಹುಲ್ಲು ತೆಗೆಯುವ ಮೆಷಿನಿನ ಅಂದಾಜು ಮೌಲ್ಯ 5000 ರೂ.ಆಗಿರುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here