ಪುತ್ತೂರು ನಗರಸಭೆ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾಗಿ ಕರುಣಾಕರ ಕುಲಾಲ್ ಆಯ್ಕೆ

0

ಪುತ್ತೂರು: ಪುತ್ತೂರು ನಗರಸಭೆಯ ಪೌರ ಸೇವಾ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಸಮುದಾಯ ವ್ಯವಹಾರ ಅಧಿಕಾರಿ ಕರುಣಾಕರ ಕುಲಾಲ್ ಆಯ್ಕೆಯಾಗಿದ್ದು, ಹಾಲಿ ಅಧ್ಯಕ್ಷ ರಾಮಚಂದ್ರ ಕೆ ಇವರಿಂದ ಅಧಿಕಾರ ಸ್ವೀಕಾರ ಕಾರ್ಯಕ್ರಮ ಆ.4ರಂದು ನಗರಸಭೆ ಸಭಾಂಗಣದಲ್ಲಿ ನಡೆಯಿತು.


ಉಪಾಧ್ಯಕ್ಷರಾಗಿ ಕಂದಾಯ ನಿರೀಕ್ಷಕ ರಾಜೇಶ್ ನಾಯ್ಕ್, ಹೊರಗುತ್ತಿಗೆಯ ಚಿದಾನಂದ್ ಉಜಿರೆಮಾರ್, ಕಾರ್ಯದರ್ಶಿಯಾಗಿ ಸೀನಿಯರ್ ವಾಲ್ಟ್‌ಮೆನ್ ಪುರುಷೋತ್ತಮ್, ಜತೆ ಕಾರ್ಯದರ್ಶಿ ದ್ವಿ.ದ.ಸಹಾಯಕಿ ಜಯಲಕ್ಷ್ಮಿ ಬಪ್ಪಳಿಗೆ, ಖಜಾಂಚಿಯಾಗಿ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಕೆ, ಸಂಘಟಣಾ ಕಾರ್ಯದರ್ಶಿಯಾಗಿ ಹಿರಿಯ ಆರೋಗ್ಯ ನಿರೀಕ್ಷಕಿ ವರಲಕ್ಷ್ಮಿ ಏನ್.ಟಿ. ಸಹ ಸಂಘಟಣಾ ಕಾರ್ಯದರ್ಶಿಯಾಗಿ ಹೊರಗುತ್ತಿಗೆ ನೌಕರ ಭಾಗೀರಥಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಹೊರಗುತ್ತಿಗೆ ನೌಕರ ರಾಧಾಕೃಷ್ಣ ಬಲ್ನಾಡ್, ಕಾನೂನು ಸಲಹೆಗಾರಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾ ಪ್ರಸಾದ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಲೆಕ್ಕಾಧೀಕ್ಷಕ ಚಂದ್ರರಾಮ ದೇವಾಡಿಗ, ಜಿಲ್ಲಾ ಪ್ರತಿನಿಧಿಗಳಾಗಿ ಫಿಟ್ಟರ್ ವಸಂತ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ, ಪ್ರೋಗಾಮರ್ ವಿನೋದ್ ಜೋಶಿ, ಹೊರುಗುತ್ತಿಗೆ ನೌಕರರಾದ ಅಮಿತ್, ಜಯಂತ್ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here