ಕು| ಸೌಜನ್ಯಳ ಅತ್ಯಾಚಾರ, ಕೊಲೆ ಮಾಡಿದ ದುಷ್ಕರ್ಮಿಗಳಿಗೆ ತಕ್ಕ ಶಾಸ್ತಿಯಾಗಲಿ

0

ಕಡಬ ಪ್ರಖಂಡ ವಿ.ಹಿಂ.ಪ ವತಿಯಿಂದ ಕಡಬ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪ್ರಾರ್ಥನೆ

ಕಡಬ: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ ದುಷ್ಕರ್ಮಿಗಳಿಗೆ ತಕ್ಕ ಶಾಸ್ತಿಯಾಗಬೇಕು ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದು ಕಡಬ ಪ್ರಖಂಡ ವಿ.ಹಿಂ.ಪ. ಪರಿಷದ್ ಬಜರಂಗದಳ, ಮಾತೃಶಕ್ತಿ ದುರ್ಗಾ ವಾಹಿನಿ ವತಿಯಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಆ.7ರಂದು ಪ್ರಾರ್ಥನೆ ಸಲ್ಲಿಸಲಾಯಿತು.


ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಇವರ ನೇತೃತ್ವದಲ್ಲಿ ಪ್ರಾರ್ಥನೆ ಮಾಡಲಾಯಿತು. ಸೌಜನ್ಯಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರೂ ಇದುವರೆಗೆ ಕೊಲೆ ಮಾಡಿದವರು ಯಾರು ಎಂದು ಪತ್ತೆಯಾಗಿಲ್ಲ, ಆದುದರಿಂದ ಕೊಲೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರಾರ್ಥಿಸಿದರು. ದೇವಳದ ಅರ್ಚಕ ಪ್ರಶಾಂತ್ ಕೆದಿಲಾಯ ಅವರು ಪ್ರಾರ್ಥನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ದೇವಳದ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಕಡಬ ಪ್ರಖಂಡ ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್, ವಿ.ಹಿಂ.ಪ. ಜಿಲ್ಲಾ ಧರ್ಮಪ್ರಸಾರ ಪ್ರಮುಖ್ ಉಮೇಶ್ ಗೋಳಿಯಡ್ಕ, ಉಪಾಧ್ಯಕ್ಷ ಸಂತೋಷ್ ಸುವರ್ಣ ಕೋಡಿಬೈಲ್, ಮಾತೃಶಕ್ತಿ ಸಹ ಪ್ರಮುಖ್ ವೀಣಾ ಕೊಲ್ಲೆಸಾಗು, ದುರ್ಗಾ ವಾಹಿನಿ ಸಂಯೋಜಕಿ ದೇವಕಿ ಪೂವಲ ಪ್ರಮುಖರಾದ ವಾಸುದೇವ ಕೊಲ್ಲೆಸಾಗು, ಸುರೇಶ್ ಕೊಟೆಗುಡ್ಡೆ, ಜಯರಾಮ ಪಡೆಜ್ಜಾರು,ಮೋಹನ್ ಕೆರೆಕೋಡಿ, ಕಿಶನ್ ಕುಮಾರ್ ರೈ, ಪ್ರಕಾಶ್ ಎನ್.ಕೆ, ತುಳಸಿಧರ ಬೈದ್ರಿಜಾಲ್, ಲೋಕಯ್ಯ ಕೊಲ್ಲೆಸಾಗು, ಗಂಗಾ ಕನಕ, ಕವಿತಾ ಕೋಲ್ಲೆಸಾಗು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here