ಕಾವು ತುಡರ್ ಯುವಕ ಮಂಡಲದಿಂದ ಬಸ್ಸು ತಂಗುದಾಣ ಶುಚಿತ್ವ

0

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದಿಂದ ಬಸ್ಸು ತಂಗುದಾಣ ಶುಚಿತ್ವ ಕಾರ್ಯಕ್ರಮವು ಆ.6ರಂದು ನಡೆಯಿತು. ಯುವಕ ಮಂಡಲವು ಪ್ರತಿ ವರ್ಷವೂ ಸ್ವಾತಂತ್ರ್ಯೋತ್ಸವದ ಮುಂಚಿತವಾಗಿ ಗ್ರಾಮದ ಬಸ್ಸು ತಂಗುದಾಣಗಳನ್ನು ಶುಚಿತ್ವಗೊಳಿಸುವ ಮೂಲಕ ಸ್ವಚ್ಛಭಾರತ್ ಯೋಜನೆಗೆ ಒತ್ತು ನೀಡುತ್ತಿದ್ದು, ಗ್ರಾಮದ ಒಟ್ಟು 7 ಬಸ್ಸು ತಂಗುದಾಣಗಳಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆಗೆದು, ಸುತ್ತಮುತ್ತಲಿನ ಪೊದೆಗಳನ್ನು ಕಡಿದು, ಮಳೆ ನೀರು ಸರಾಗವಾಗಿ ಹೋಗಲು ಚರಂಡಿಯನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಜಗದೀಶ ನಾಯ್ಕ ಆಚಾರಿಮೂಲೆ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ನನ್ಯ, ಪದಾಧಿಕಾರಿಗಳಾದ ರಾಮಣ್ಣ ನಾಯ್ಕ ಆಚಾರಿಮೂಲೆ, ಶ್ರೀಕುಮಾರ್ ಬಲ್ಯಾಯ, ಹರೀಶ್ ಕೆರೆಮೂಲೆ, ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ, ಯುವಕ ಮಂಡಲದ ಮಾಜಿ ಅಧ್ಯಕ್ಷ ಸುನೀಲ್ ನಿಧಿಮುಂಡ, ಸದಸ್ಯರಾದ ಜಗನ್ನಾಥ ಗೌಡ ಪರನೀರು, ರಮೇಶ್ ಗೌಡ ಆಚಾರಿಮೂಲೆ, ರಾಜೇಶ್ ಕಾವು, ಭವಿತ್ ರೈ ಮದ್ಲರವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here