ಕಾವು ಶಾಲೆಯಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯಕ್ರಮ

0

ಪುತ್ತೂರು: ಮೆದುಳಿಗೆ ನಾವು ಕೊಡುವ ಸಂದೇಶ ಹಾಗೂ ಆಲೋಚನೆಯ ಮೇಲೆ ಮೆದುಳಿನ ಸಾಮರ್ಥ್ಯ ನಿಂತಿದೆ, ಒಳಗಿರುವ ಕಸವನ್ನು ಹೊರಗೆ ಹಾಕಿ ಗುರಿಯ ಊಹೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷೆ ಅಪೂರ್ವ ಕಾರಂತ್ ಹೇಳಿದರು.


ಕಾವು ಸರಕಾರಿ ಹಿ.ಪ್ರಾ ಶಾಲೆಯಲ್ಲಿ ನಡೆದ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ಸಾಹಿತ್ಯ ರಚನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕಾರ್ಯಾಗಾರದಲ್ಲಿ 5, 6 ,7, 8ನೇ ತರಗತಿಯ ಒಟ್ಟು 124 ಮಕ್ಕಳು ಭಾಗವಹಿಸಿದ್ದರು.

ಸಕಾರಾತ್ಮಕ ಊಹೆಯನ್ನು ಮಾಡಿಕೊಳ್ಳುವ ಉಪಯೋಗ, ಕ್ರಿಸ್ಟಲ್ ಬಾಲ್ ಪವರ್ ಟೆಕ್ನಿಕ್, ಓದಿನ ವಿಧಾನ, ಪರೀಕ್ಷಾ ಭಯ ಹೋಗಲಾಡಿಸುವಿಕೆ, ಸ್ಮರಣ ಶಕ್ತಿ ವಿಷಯಗಳ ಕುರಿತು ಮಾತನಾಡಿ ಅನೇಕ ಪ್ರಶ್ನೆಗಳ ಮೂಲಕ ಕಾರ್ಯಾಗಾರದಲ್ಲಿ ಮಕ್ಕಳನ್ನು ತೊಡಗಿಸಿದರು.

LEAVE A REPLY

Please enter your comment!
Please enter your name here