![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಸಾಮಾಗ್ರಿಗಳನ್ನಿಡಲು ಕಬ್ಬಿಣದ ಕಪಾಟನ್ನು ವೇ ಮೂ ಕುಂಬ್ಳೆ ವೆಂಕಟೇಶ್ ವಾಸುದೇವ ಭಟ್ ಅವರ ತಂದೆಯ ಸ್ಮರಣಾರ್ಥ ಕೊಡುಗೆಯಾಗಿ ಆ.8 ರಂದು ದೇವಳಕ್ಕೆ ಸಮರ್ಪಣೆ ಮಾಡಿದರು.
![](https://puttur.suddinews.com/wp-content/uploads/2023/08/d11bf615-6d6f-4bf3-a626-fd954469a50b.jpg)
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರಿಗೆ ವೇ ಮೂ ಕುಂಬ್ಳೆ ವೆಂಕಟೇಶ್ ಭಟ್ ಅವರಿಗೆ ಕಪಾಟಿನ ಕೀ ಹಸ್ತಾಂತರಿಸಿದರು. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ರವೀಂದ್ರ, ವಜ್ರಮಾತ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ನಯನಾ ರೈ, ಕಾರ್ಯದರ್ಶಿ ಶಾರದಾ ಕೇಶವ್, ಸದಸ್ಯರಾದಶಾಲಿನಿ, ಯಮುನಾ, ಚಂದ್ರಪ್ರಭಾ, ಶೋಭಾ ಉಪಸ್ಥಿತರಿದ್ದರು.