ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಜನಾ ಸಾಮಾಗ್ರಿಗಳನ್ನಿಡಲು ಕಪಾಟು ಕೊಡುಗೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಸಾಮಾಗ್ರಿಗಳನ್ನಿಡಲು ಕಬ್ಬಿಣದ ಕಪಾಟನ್ನು ವೇ ಮೂ ಕುಂಬ್ಳೆ ವೆಂಕಟೇಶ್ ವಾಸುದೇವ ಭಟ್ ಅವರ ತಂದೆಯ ಸ್ಮರಣಾರ್ಥ ಕೊಡುಗೆಯಾಗಿ ಆ.8 ರಂದು ದೇವಳಕ್ಕೆ ಸಮರ್ಪಣೆ ಮಾಡಿದರು.


ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಅವರಿಗೆ ವೇ ಮೂ ಕುಂಬ್ಳೆ ವೆಂಕಟೇಶ್ ಭಟ್ ಅವರಿಗೆ ಕಪಾಟಿನ ಕೀ ಹಸ್ತಾಂತರಿಸಿದರು. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಿಬ್ಬಂದಿ ರವೀಂದ್ರ, ವಜ್ರಮಾತ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ನಯನಾ ರೈ, ಕಾರ್ಯದರ್ಶಿ ಶಾರದಾ ಕೇಶವ್, ಸದಸ್ಯರಾದಶಾಲಿನಿ, ಯಮುನಾ, ಚಂದ್ರಪ್ರಭಾ, ಶೋಭಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here