ಬಲ್ನಾಡು:ಸೊಪ್ಪು ಕಡಿಯುವಾಗ ಮರದಿಂದ ಬಿದ್ದು ಮೃತ್ಯು

0

ಪುತ್ತೂರು:ಅಡಿಕೆ ಗಿಡಗಳಿಗೆ ಹಾಕಲೆಂದು ವ್ಯಕ್ತಿಯೊಬ್ಬರು ಸೊಪ್ಪು ಕಡಿಯುತ್ತಿರುವಾಗ ಮರದಿಂದ ಬಿದ್ದು ಮೃತಪಟ್ಟ ಘಟನೆ ಆ.7ರಂದು ಬಲ್ನಾಡು ಗ್ರಾಮದ ನೆಕ್ಕರೆಯಲ್ಲಿ ನಡೆದಿದೆ.


ಬಲ್ನಾಡು ಗ್ರಾಮದ ನೆಕ್ಕರೆ ನಿವಾಸಿ ಲಿಂಗಪ್ಪ ಮೂಲ್ಯ(62ವ)ರವರು ಮೃತಪಟ್ಟವರು.ಅವರು ತಮ್ಮ ಅಡಿಕೆ ಗಿಡಗಳಿಗೆ ಸೊಪ್ಪು ಹಾಕಲೆಂದು ಮನೆಯ ಪಕ್ಕದ ಬನ್ಪು ಜಾತಿಯ ಮರವನ್ನು ಏರಿ ಸೊಪ್ಪು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.ಮೃತರ ಪುತ್ರ ಧನಂಜಯ ಎನ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here