ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಭೆ

0

ಸೆ.30ರಂದು ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ

ಪುತ್ತೂರು: ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ವತಿಯಿಂದ ಗಣೇಶೋತ್ಸವದ ಸಲುವಾಗಿ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ದಿ.ಉದಯ ಚೌಟರವರ ಸ್ಮರಣಾರ್ಥ ಮ್ಯಾಟ್ ಅಂಕಣದಲ್ಲಿ ನಡೆಯುವ ಪ್ರೊ ಕಬಡ್ಡಿ ಮಾದರಿಯ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟದ ಪೂರ್ವಭಾವಿ ಸಭೆಯು ಆ.8 ರಂದು ದರ್ಬೆ ನಿರೀಕ್ಷಣ ಮಂದಿರದ ಬಳಿ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸೆ.30ರಂದು ಪ್ರೊ ಕಬಡ್ಡಿ:
ಕಿಲ್ಲೆ ಮೈದಾನದಲ್ಲಿ ಮ್ಯಾಟ್ ಅಂಕಣದಲ್ಲಿ ನಡೆಯಲಿರುವ ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಅಹರ್ನಿಶಿ ಪಂದ್ಯಾಟವು 2023ನೇ ಸೆ.30 ರಂದು ನಡೆಸಲಾಗುವುದು ಜೊತೆಗೆ ಪ್ರೌಢಶಾಲೆಯ ವಿದ್ಯಾರ್ಥಿ ತಂಡಗಳ ನಡುವೆ ಪ್ರದರ್ಶನ ಪಂದ್ಯಾಟವನ್ನೂ ನಡೆಸಲಾಗುವುದು. ಈ ಪಂದ್ಯಾಕೂಟದಲ್ಲಿ ಆಹ್ವಾನಿತ ಬಲಿಷ್ಟ 16 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ ಎಂದು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ವ್ಯಕ್ತವಾಯಿತು. ಈ ಬಾರಿಯೂ ಕ್ರೀಡಾಭಿಮಾನಿಗಳ ಪ್ರೋತ್ಸಾಹವನ್ನು ನಿರೀಕ್ಷೆ ಮಾಡುತ್ತಾ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗುತ್ತಿದ್ದು, ಕಬಡ್ಡಿ ಕ್ರೀಡಾಭಿಮಾನಿಗಳು ಆಶೀರ್ವದಿಸಬೇಕಾಗಿದೆ ಎಂದು ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರು ಸಭೆಯಲ್ಲಿ ಹೇಳಿದರು.


ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಉದ್ಯಮಿಗಳಾದ ಶಿವರಾಂ ಆಳ್ವ, ಶಶಿಕಿರಣ್ ರೈ ನೂಜಿಬೈಲು, ರೋಶನ್ ರೈ ಬನ್ನೂರು, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್ ಡಿ’ಸೋಜ, ದೈಹಿಕ ಶಿಕ್ಷಣ ಶಿಕ್ಷಕ ಸತ್ಯನಾರಾಯಣ ರೈ, ಕಬಡ್ಡಿ ಕೋಚ್ ಹಬೀಬ್ ಮಾಣಿ, ರೆಫ್ರೀ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ, ಸದಸ್ಯ ಪುರುಷೋತ್ತಮ್ ಕೋಲ್ಫೆ, ರಫೀಕ್ ಎಂ.ಕೆ, ಸುರೇಶ್ ಪೂಜಾರಿ, ಸಿದ್ಧೀಕ್ ತಂಬುತ್ತಡ್ಕ, ಹೊನ್ನಪ್ಪ ಗೌಡ ಓಜಾಳ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಸ್ವಾಗತಿಸಿ, ಬಾಲಕೃಷ್ಣ ಪೊರ್ದಾಲ್ ವಂದಿಸಿದರು.

LEAVE A REPLY

Please enter your comment!
Please enter your name here