ಕಟ್ಟತ್ತಾರು ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ರಚನೆ

0

ಅಧ್ಯಕ್ಷರಾಗಿ ಪ್ರಭಾಕರ ಮೇರ್ಲ ಆಯ್ಕೆ


ಪುತ್ತೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ಸರಕಾರಿ ಹಿ.ಪ್ರಾ.ಶಾಲಾ ಎಸ್‌ಡಿಎಂಸಿಗೆ ನೂತನ ಅಧ್ಯಕ್ಷರಾಗಿ ಪ್ರಭಾಕರ ಮೇರ್ಲರವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಶಾರದಾ, ಸದಸ್ಯರಾಗಿ ಪ್ರೇಮ, ಅಹ್ಮದ್ ಕಬೀರ್, ಝೂರ, ಔರಾಬಿ, ಅಸ್ಮಾಮ ಸಜೀನ, ಫಾತಿಮತ್ ಸೆರೀನಾ, ಮಿಸ್ರಿಯ,ಮೈಮುನ, ಝೂರ, ರವೀಂದ್ರ, ಯತೀಶ, ಇಬ್ರಾಹಿಂ, ಯಶೋಧಾ, ಪುಷ್ಪಾವತಿ, ನೆಸೀಮಾರವರುಗಳನ್ನು ಆಯ್ಕೆ ಮಾಡಲಾಯಿತು. ಕೆಯ್ಯೂರು ಗ್ರಾಪಂ ಸದಸ್ಯ ಬಟ್ಯಪ್ಪ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಗ್ರಾಪಂ ಸದಸ್ಯರಾದ ಮಮತಾ ರೈ, ನೆಬಿಸಾ, ಶೇಷಪ್ಪ ದೇರ್ಲ, ಎಸ್‌ಡಿಎಂಸಿ ಅಧ್ಯಕ್ಷ ನವೀದ್, ಶಾಲಾ ಮುಖ್ಯಗುರು ತಾರಾ ಎಸ್.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್‌ಡಿಎಂಸಿಯಲ್ಲಿ ತೆರವಾದ 6 ಸದಸ್ಯರ ಸ್ಥಾನಕ್ಕೆ ಬೇರೆ 6 ಮಂದಿ ಸದಸ್ಯರನ್ನು ಇಲಾಖಾ ನಿಯಮಾನುಸಾರ ಆಯ್ಕೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಬಟ್ಯಪ್ಪ ರೈ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಮುಖ್ಯಗುರು ತಾರಾ ಎಸ್.ಸ್ವಾಗತಿಸಿ, ಅತಿಥಿ ಶಿಕ್ಷಕಿ ಕೆ.ಮಾಣಿಕ್ಯ ವಂದಿಸಿದರು. ಸಹ ಶಿಕ್ಷಕಿ ಇಂದಿರಾ ಕೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ನಳಿನಿ ಡಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here