ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್

0

ಗೌರವಾಧ್ಯಕ್ಷ: ಇಬ್ರಾಹಿಂ ಕಡ್ಯ, ಅಧ್ಯಕ್ಷ: ಯೂಸುಫ್ ಹಾಜಿ, ಪ್ರ.ಕಾರ್ಯದರ್ಶಿ: ಕೆ.ಆರ್ ಹುಸೈನ್ ದಾರಿಮಿ

ಪುತ್ತೂರು: ಕಡ್ಯ ಮಹಮ್ಮದ್ ಹಾಜಿ ಚಾರಿಟೇಬಲ್ ಟ್ರಸ್ಟ್ ಇದರ 2023-24ನೇ ಸಾಲಿನ ಅಧ್ಯಕ್ಷರಾಗಿ ಯೂಸುಫ್ ಹಾಜಿ ಕಡ್ಯ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಪುನರಾಯ್ಕೆಗೊಂಡಿದ್ದಾರೆ. ಗೌರವಾಧ್ಯಕ್ಷರಾಗಿ ಇಬ್ರಾಹಿಂ ಕಡ್ಯ, ಕಾರ್ಯದರ್ಶಿಯಾಗಿ ಕೆ.ಎಂ ಹನೀಫ್ ರೆಂಜಲಾಡಿ ಪುನರಾಯ್ಕೆಯಾದರು. ಕೋಶಾಧಿಕಾರಿಯಾಗಿ ರಹೀಂ ರೆಂಜಲಾಡಿಯವರನ್ನು ಆಯ್ಕೆ ಮಾಡಲಾಯಿತು.


ಕೆ.ಆರ್ ಹುಸೈನ್ ದಾರಿಮಿ ನಿವಾಸದಲ್ಲಿ ನಡೆದ ಸಮಿತಿಯ ಪ್ರಥಮ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಜಲೀಲ್ ಫೈಝಿ ಸೋಂಪಾಡಿ ಸಭೆ ಉದ್ಘಾಟಿಸಿದರು. ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ ವರದಿ ಲೆಕ್ಕಪತ್ರ ಮಂಡಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರ.ಕಾರ್ಯದರ್ಶಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಸಮಯೋಚಿತವಾಗಿ ಮಾತನಾಡಿದರು. ಅನೀಸ್ ಕೌಸರಿ, ಆರ್.ಎಂ ಅಲಿ ಹಾಜಿ, ಇಮ್ರಾನ್ ರೆಂಜಲಾಡಿ, ರಹೀಂ ರೆಂಜಲಾಡಿ, ಯೂಸುಫ್ ರೆಂಜಲಾಡಿ ಮೊದಲಾದವರು ಶುಭ ಹಾರೈಸಿದರು.

ಸಭೆಯಲ್ಲಿ ಕೆಎಂಎಚ್ ವರ್ಕಿಂಗ್ ಕಮಿಟಿ ನಿರ್ದೇಶಕರಾದ ಇಬ್ರಾಹಿಂ ಸೋಂಪಾಡಿ, ರಝಾಕ್ ವೀರಮಂಗಲ, ಮಜೀದ್ ರೆಂಜಲಾಡಿ, ರಫೀಕ್ ರೆಂಜಲಾಡಿ, ಕರೀಂ ಸೋಂಪಾಡಿ, ಅಮೀರ್ ರೆಂಜಲಾಡಿ, ಅಝೀಝ್ ರೆಂಜಲಾಡಿ, ಹಸೈನಾರ್ ಡಿಪಿಒ, ಉಮ್ಮರ್ ಕೆ.ಪಿ ನರಿಮೊಗರು, ಅಬೂಬಕ್ಕರ್ ಉಸ್ತಾದ್, ಹಸನ್ ರೆಂಜಲಾಡಿ, ಹಾರಿಸ್ ಕೂಡುರಸ್ತೆ, ಫಾರೂಕ್ ವೀರಮಂಗಲ, ಅಝರುದ್ದೀನ್ ಕೂಡುರಸ್ತೆ, ಹನೀಫ್ ಆರ್.ಐ ರೆಂಜಲಾಡಿ ಹಾಗೂ ಸಮದ್ ರೆಂಜಲಾಡಿ, ಸಿರಾಜ್ ರೆಂಜಲಾಡಿ ಉಪಸ್ಥಿತರಿದ್ದರು. ಯೂಸುಫ್ ರೆಂಜಲಾಡಿ ಸ್ವಾಗತಿಸಿ ವಂದಿಸಿದರು. ಇದಕ್ಕೂ ಮೊದಲು ಕಡ್ಯ ಕುಟ್ಯಾಮಿ ಉಪಾಪ ಅನುಸ್ಮರಣೆ ನಡೆಯಿತು. ಪತ್ನಿಯೊಂದಿಗೆ ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿರುವ ಇಸ್ಮಾಯಿಲ್ ದರ್ಬೆ ಅವರನ್ನು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.

LEAVE A REPLY

Please enter your comment!
Please enter your name here