ನಾಳೆ(ಆ.13): ಪಡುಮಲೆ ಬಡಗನ್ನೂರು ಮರಾಟಿ ಸಂಘದ ವಾರ್ಷಿಕ ಮಹಾಸಭೆ, ಆಟ ಐಸಿರಿ, ವನಮಹೋತ್ಸವ, ಸಾಧಕರಿಗೆ ಸನ್ಮಾನ

0

ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ (ರಿ) ಕೊಂಬೆಟ್ಟು ಮುತ್ತೂರು ದ. ಕ. ಇದರ ಗಾಮೀಣ ಶಾಖೆ ಮರಾಟಿ ಸಮಾಜ ಸೇವಾ ಸಂಘ ಪಡುಮಲೆ ಬಡಗನ್ನೂರು ಇದರ ವಾರ್ಷಿಕ ಮಹಾಸಭೆ, ಆಟ ಐಸಿರಿ, ವನಮಹೋತ್ಸವ, ಸಾಧಕರಿಗೆ ಸನ್ಮಾನ ಆ.13 ರಂದು ಪೂರ್ವಾಹ್ನ ಗಂ 9ಕ್ಕೆ ನೀಲಗಿರಿ ನಾರಾಯಣ ನಾಯ್ಕ ಪಟ್ಟೆ, ಇವರ ಮನೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ  ಮಹಾಲಿಂಗ ನಾಯ್ಕ ಉದ್ಘಾಟನೆ ಮಾಡಿಲಿದ್ದಾರೆ, ಸಭೆಯು ಪಡುಮಲೆ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ  ಕೇಶವ ಪ್ರಸಾದ್ ನೀಲಗಿರಿರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಥಿತಿಗಳಾಗಿ ಪುತ್ತೂರು, ಕೊಂಬೆಟ್ಟು  ಮ, ಸ, ಸೇ. ಸಂಘದ ಅಧ್ಯಕ್ಷ  ಮಂಜುನಾಥ ಎನ್. ಎಸ್., ನಿವೃತ್ತ BSNL ಉದ್ಯೋಗಿ ರಾಮ ನಾಯ್ಕ ಪರಿಗೇರಿ, ಪುತ್ತೂರು ಕೊಂಬೆಟ್ಟು  ಮರಾಟ ಮಹಿಳಾ ವೇದಿಕೆ ಅಧ್ಯಕ್ಷೆ ಯಮುನಾ ವೈ. ಕೆ. ನಾಯ್ಕ ಪಟ್ಟೆ ಭಾಗವಹಿಸಲಿದ್ದಾರೆ .

ಈ ಕಾರ್ಯಕ್ರಮಕ್ಕೆ  ಸಮಾಜ ಬಾಂಧವರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here