ಆ.14ಕ್ಕೆ ಬಂದ್, ರಸ್ತೆ ತಡೆ ಮಾಡುವಂತಿಲ್ಲ-ಪುತ್ತಿಲ ಪರಿವಾರಕ್ಕೆ ಪೊಲೀಸ್ ಇಲಾಖೆಯಿಂದ ಸೂಚನೆ

0

ಪುತ್ತೂರು: ಬಂದ್, ರಸ್ತೆ ತಡೆ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಈ ನಿಟ್ಟಿನಲ್ಲಿ ಸೌಜನ್ಯ ಪ್ರಕರಣದ ಕುರಿತು ಪುತ್ತಿಲ ಪರಿವಾರದಿಂದ ಬಂದ್ ಮತ್ತು ರಸ್ತೆ ತಡೆಯ ಮೂಲಕ ಆ.14ರಂದು ನಡೆಯುವ ‘ನಮ್ಮ ನಡೆ ನ್ಯಾಯದ ಕಡೆ’ ಪ್ರತಿಭಟನೆಯಲ್ಲಿ ಬಂದ್ ಮತ್ತು ರಸ್ತೆ ತಡೆಗೆ ಅನುಮತಿ ನೀಡಿಲ್ಲ ಎಂದು ಪುತ್ತೂರು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರು ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಿದ್ದಾರೆ.


ಶಾಂತಿಯುತ ಪ್ರತಿಭಟನೆ ನಡೆಸಬಹುದು ಹೊರತು ಬಂದ್ ಮತ್ತು ರಸ್ತೆ ತಡೆಗೆ ಮಾಡಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಪುತ್ತಿಲ ಪರಿವಾರದಿಂದ ಪುತ್ತೂರು ಬಸ್‌ನಿಲ್ದಾಣದ ಬಳಿ ನಡೆಯುವ ಬಂದ್ ಮತ್ತು ರಸ್ತೆ ತಡೆಯ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಈ ಕುರಿತು ಸಂಘಟಕರಿಗೆ ನೋಟೀಸ್ ನೀಡುವಂತೆ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಿದ್ದೇನೆ ಎಂದು ಡಿವೈಎಸ್ಪಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here