ಆತೂರು ಬದ್ರಿಯಾ ವಿದ್ಯಾಸಂಸ್ಥೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಸಭೆ

0

ರಾಮಕುಂಜ: ಆತೂರು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಸಭೆ ಆ.14ರಂದು ನಡೆಯಿತು.


ಸಂಸ್ಥೆಯ ಸಂಚಾಲಕ ಪಿ.ಆದಂ ಹಾಜಿ ಪಿಲಿಕುಡೇಲು ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿದ್ದ ರಫೀಕ್ ಮಾಸ್ಟರ್ ಆತೂರುರವರು ಪ್ರೇರಣಾತ್ಮಕ ಮಾತುಗಳನ್ನಾಡಿದರು. 2022-23ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಂಸ್ಥೆಯ ಸಂಚಾಲಕ ಪಿ.ಆದಂ ಹಾಜಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.


ಸಂಸ್ಥೆಯ ಕಾರ್ಯದರ್ಶಿ ಕೆ.ಎ.ಯಾಹ್ಯ ಎಲ್ಯಂಗ, ಖಜಾಂಜಿ ಬಿ.ಆರ್.ಅಬ್ದುಲ್ ಖಾದರ್, ಕಮಿಟಿಯ ಸದಸ್ಯರಾದ ಕೆ.ಎ.ಸುಲೈಮಾನ್ ಎಲ್ಯಂಗ, ಪ್ರಾಂಶುಪಾಲರಾದ ಮಲ್ಲಿಕಾ, ಮುಖ್ಯೋಪಾಧ್ಯಾಯಿನಿ ಅಮಿತಾ ಉಪಸ್ಥಿತರಿದ್ದರು. ಹೊಸತಾಗಿ ಸಂಸ್ಥೆಗೆ ಸೇರ್ಪಡೆಗೊಂಡ ಶಿಕ್ಷಕರು ಪರಿಚಯ ಮಾಡಿಕೊಂಡರು. ಸಹಶಿಕ್ಷಕಿ ಸಾಜಿದ ಸ್ವಾಗತಿಸಿ, ಸಹಶಿಕ್ಷಕಿ ನಾಸ್ಮಿನ್ ತಾಜ್ ವಂದಿಸಿದರು. ಶಿಕ್ಷಕಿ ಸನಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here