ಕೆಯ್ಯೂರು ಗ್ರಾಪಂನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತದಲ್ಲಿ ‘ರಾಷ್ಟ್ರ ಧ್ವಜಾರೋಹಣ’ ವನ್ನು ಗ್ರಾಮ ಪಂಚಾಯತು ಅಧ್ಯಕ್ಷೆ ಜಯಂತಿ ಎಸ್ ಭಂಡಾರಿಯವರು ನೆರವೆರಿಸಿದರು ಹಾಗೂ ‘ನನ್ನ ಮಣ್ಣು ನನ್ನ ದೇಶ’ ‘ವಸುದಾನಂದನ’ ಅಭಿಯಾನದಡಿ ಗಿಡ ನೆಡಲಾಯಿತು.

ಪಂಚಪ್ರಾಣ ಶಪಥ ಬೋಧನೆ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತು ಸದಸ್ಯರುಗಳಾದ ಶರತ್ ಕುಮಾರ್, ಬಟ್ಯಪ್ಪ ರೈ, ಅಬ್ದುಲ್ ಖಾದರ್ ಮೇರ್ಲ ಸಂಧರ್ಬೊಚಿತವಾಗಿ ಮಾತಾಡಿ ಶುಭ ಹಾರೈಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಗಿರಿಜ ಕೆ , ಸದಸ್ಯರುಗಳಾದ ಅಮಿತಾ ಎಚ್ ರೈ , ತಾರನಾಥ ಕಂಪ. ವಿಜಯ ಕುಮಾರ್, ಮೀನಾಕ್ಷಿ ವಿ ರೈ, ಸುಮಿತ್ರ , ನೆಬಿಸಾ, ಮಮತ ರೈ, ಸಂಜೀವಿನಿ ತಂಡದ ಪ್ರತಿನಿಧಿಗಳು , ಒಕ್ಕೂಟದ ಸದಸ್ಯರು , ಅಂಗನವಾಡಿ ಕಾರ್ಯಕರ್ತೆ ಪದ್ಮಾಕ್ಷಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು . ಗ್ರಾಮ ಪಂಚಾಯತು ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗ್ರಾಮ ಪಂಚಾಯತು ಸಿಬ್ಬಂದಿಗಳಾದ ಶಿವಪ್ರಸಾದ್ ರೈ, ಮಾಲತಿ ರೈ, ರಾಕೇಶ್ ಎಂ. ಧರ್ಮಣ್ಣ ಎಂ. ರಫೀಕ್ ತಿಂಗಳಾಡಿ ಸಹಕರಿಸಿದ್ದರು.

LEAVE A REPLY

Please enter your comment!
Please enter your name here