ಕೆದಂಬಾಡಿ: ಇದ್ಪಾಡಿ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕೆದಂಬಾಡಿ ಗ್ರಾಮದ ಇದ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಧ್ವಜಸ್ತಂಭ ಕೊಡುಗೆ ನೀಡಿದ ಇಸ್ಮಾಯಿಲ್ ಗಟ್ಟಮನೆಯವರು ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಪಂ ಸದಸ್ಯೆ ಸುಜಾತ, ಹಿರಿಯರಾದ ಮೊದುಕುಟ್ಟಿ, ಇಬ್ರಾಹಿಂ ಸಿ.ಎಂ, ಇಬ್ರಾಹಿಂ ಬೆದ್ರಗುರಿ, ಅಬ್ದುಲ್ಲ ಗಟ್ಟಮನೆ, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಮಾಜ ಸೇವಾ ನಿರ್ದೇಶಕ ಬಾಬು ಪೂಜಾರಿ ಇದ್ಪಾಡಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಮೈಮುನಾ, ಸಂಜೀವಿನಿ ಒಕ್ಕೂಟದ ಪೂರ್ಣಿಮ, ಸಂಘದ ಸದಸ್ಯರು, ಮಕ್ಕಳ ತಾಯಂದಿರು, ಊರವರು ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿಗಳಾದ ಮಹಮ್ಮದ್ ಸುಜಾಹ್ ಮತ್ತು ಮಹಮ್ಮದ್ ಶಮ್ಮಸ್‌ರವರು ಅಂಗನವಾಡಿಗೆ ಕುಕ್ಕರ್ ಅನ್ನು ಕೊಡುಗೆಯಾಗಿ ನೀಡಿದರು. ಇರ್ಷಾದ್ ಗಟ್ಟಮನೆ, ಬಶೀರ್ ಗಟ್ಟಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಜಾನಕಿ ವಂದಿಸಿದರು.

LEAVE A REPLY

Please enter your comment!
Please enter your name here