ಬನ್ನೂರು ಕಜೆ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಬನ್ನೂರು ಕಜೆ ಅಂಗನವಾಡಿ ಕೇಂದ್ರದಲ್ಲಿ ಬಾಲವಿಕಾ ಸಮಿತಿ ಅಧ್ಯಕ್ಷೆ ಭವ್ಯ ವಿಶ್ವನಾಥ್ ಧ್ವಜಾರೋಹಣ ಮಾಡಿದರು .


ಭಾಸ್ಕರ್ ಕೋಡಿಂಬಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಡೆನ್ನಿಸ್ ಮಸ್ಕರೇನ್ಹಸ್ , ಬನ್ನೂರು ಗ್ರಾ.ಪಂ ಸದಸ್ಯ ಶೀನಪ್ಪ ಕುಲಾಲ್ , ಶ್ರೀ ಕೃಷ್ಣ ಯುವಕ ಮಂಡಲ ಅಧ್ಯಕ್ಷರು ಮತ್ತು ಸದಸ್ಯರು, ಸದಾಶಿವ ಕಲೋನಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತು ಸದಸ್ಯರು, ಮಕ್ಕಳ ಪೋಷಕರು, ಶ್ರೀ ಶಕ್ತಿ ಸಂಘದ ಸದಸ್ಯರು. ಮಕ್ಕಳು ಭಾಗವಹಿಸಿದರು. ಶ್ರೀ ಕೃಷ್ಣ ಯುವಕ ಮಂಡಲ ಅಧ್ಯಕ್ಷರು ರಾಜೇಶ್ ಗೌಡ ಗೋಳ್ತಿಲ ಮತ್ತು ಸದಸ್ಯರ ವತಿಯಿಂದ ಮಕ್ಕಳಿಗ ಪುಸ್ತಕ ಹಾಗು ಕೆಲವು ಕಲಿಕಾ ವಸ್ತುಗಳನ್ನು ವಿತರಿಸಲಾಯಿತು, ಶ್ರೀ ಶಕ್ತಿ ಸಂಘದ ಸದಸ್ಯರು, ಪಂಚಾಯತ್ ಸದಸ್ಯ ,ಮಕ್ಕಳ ಅಭಿವೃದ್ದಿ ಸಮಿತಿಯ ಸದಸ್ಯರ ವತಿಯಿಂದ ಅಂಗನವಾಡಿಗೆ ಪೂರಕವಾದ ಕೆಲವು ವಸ್ತುಗಳನ್ನು ವಿತರಿಸಲಾಯಿತು. ಬಾಲವಿಕಾಸ ಸಮಿತಿಯ ಸದಸ್ಯರಾದ ಮೆಲ್ವಿನ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಅಂಗನವಾಡಿ ಶಿಕ್ಷಕಿ ರೇಖಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here