ರಾಮನಗರ: ಶ್ರೀ ಶಾರದೋತ್ಸವ ಸಮಿತಿಗೆ ಆಯ್ಕೆ

0

ಉಪ್ಪಿನಂಗಡಿ: ಇಲ್ಲಿನ ರಾಮನಗರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಮಡಿವಾಳ, ಕಾರ್ಯದರ್ಶಿಯಾಗಿ ದೀಪಕ್ ಪೈ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ವಿದ್ಯಾಧರ ಜೈನ್, ಜೊತೆ ಕಾರ್ಯದರ್ಶಿಯಾಗಿ ಗಣೇಶ ಬಂಡಾರಿ, ಕೋಶಾಧಿಕಾರಿಯಾಗಿ ಕಂಗ್ವೆ ವಿಶ್ವನಾಥ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ರಾಮಚಂದ್ರ ಮಣಿಯಾಣಿ, ಗೌರವಾಧ್ಯಕ್ಷರಾಗಿ ನಂದಾವರ ಉಮೇಶ್ ಶೆಣೈ ಅವರನ್ನು ಆಯ್ಕೆ ಮಾಡಲಾಯಿತು.


ರಾಮನಗರದ ಶ್ರೀ ಶಾರದಾ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಈ ಸಂದರ್ಭ ಸದಸ್ಯರಾದ ಎನ್. ಗಣೇಶ್ ಶೆಣೈ, ಎಚ್.ಎಂ. ನಾರಾಯಣ ಹೆಗ್ಡೆ, ಜಯಂತ ಪೊರೋಳಿ, ಚಂದ್ರಶೇಖರ ಆಚಾರ್ಯ, ವಿಶ್ವನಾಥ ಮರಿಕೆ, ವೇಣುಗೋಪಾಲ ಸಂಗಮ್, ಜನಾರ್ದನ ಮರಿಕೆ, ಎನ್. ಮಂಜುನಾಥ ಶೆಣೈ, ಶ್ರೀಮತಿ ಶ್ಯಾಮಲಾ ಶೆಣೈ, ಸಂತೋಷ್ ರಾಮನಗರ, ನಾಗರಾಜ ರಾಮನಗರ, ಧನಂಜಯ ನಟ್ಟಿಬೈಲು, ರಘುರಾಮ ಎ., ರಾಜಗೋಪಾಲ್ ಹೆಗ್ಡೆ, ಪುಷ್ಪರಾಜ್ ಶೆಟ್ಟಿ, ಕಿಶೋರ್ ಜೋಗಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here