ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ತಾಳಮದ್ದಳೆ

0

ಪುತ್ತೂರು: ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರ, ಶ್ರೀಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಸಾನಿಧ್ಯದಲ್ಲಿ ಆ. 15 ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಯಕ್ಷಗಾನ ತಾಳಮದ್ದಳೆ “ವೀರಮಣಿ ಕಾಳಗ” ನಡೆಯಿತು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಕಲಾವಿದರಿಗೆ ಶಾಲು ಹೊದಿಸಿ, ಫಲ ಮಂತ್ರಾಕ್ಷತೆ, ಪ್ರಸಾದವನ್ನು ನೀಡಿ ಹರಸಿದರು.

ಹಿಮ್ಮೇಳದಲ್ಲಿ,ಭಾಗವತಿಕೆಯಲ್ಲಿ, ಕು| ಸಿಂಚನಾ ಮೂಡುಕೋಡಿ ಮದ್ದಳೆಯಲ್ಲಿ ರಾಮದಾಸ್ ಶೆಟ್ಟಿ ದೇವಸ್ಯ, ಚೆಂಡೆಯಲ್ಲಿ,ಮಾ| ಅದ್ವೈತ್ ಕನ್ಯಾನ ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಹನುಮಂತ),ಜಯಲಕ್ಷ್ಮಿ ವಿ ಭಟ್(ವೀರಮಣಿ),ಪ್ರೇಮಾ ಕಿಶೋರ್(ಈಶ್ವರ),ಶುಭಾ ಪಿ ಆಚಾರ್ಯ(ಶತ್ರುಘ್ನ-1),ಹೀರಾ ಉದಯ್(ಶ್ರೀರಾಮ)
ಶೃತಿ ವಿಸ್ಮಿತ್ (ಶತ್ರುಘ್ನ-2) ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here