ಬಿಳಿನೆಲೆ ಬೈಲು ಸ. ಹಿ.ಪ್ರ ಶಾಲೆಯಲ್ಲಿ ಕಡಬ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

0

ಪುತ್ತೂರು:ಬಿಳಿನೆಲೆ ಬೈಲು ಸ. ಹಿ.ಪ್ರ ಶಾಲೆಯಲ್ಲಿ ಕಡಬ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಆ.17ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಶಿವ ಶಂಕರ್ ರವರ ಅಧ್ಯಕ್ಷತೆ ವಹಿಸಿದ್ದರು.,ಎಸ್‌ ಡಿ ಎಮ್‌ ಸಿ ಅಧ್ಯಕ್ಷ ಯಶೋಧರ ದೀಪ ಪ್ರಜ್ವಲನದೊಂದಿಗೆ ವಲಯ ಮಟ್ಟದ ಬಾಲಕ/ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಉದ್ಘಾಟನೆಗೊಂಡಿತು.

ಮುಖ್ಯ ಅತಿಥಿಗಳಾಗಿ ಹಿರಿಯಣ್ಣ ಗೌಡ ಅಮೈ, ರಾಮಕೃಷ್ಣ ಮಲ್ಲಾರ,ವಲಯ ನೋಡಲ್ ಅಧಿಕಾರಿ ಅಬ್ರಹಾಂ ಕೊಂಬಾರು,ಸಿ ಆರ್‌ ಪಿ ಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಪೊಂಬೋಳಿ,ಬಿಳಿನೆಲೆ ಯುವಕ ಮಂಡಲದ ಅಧ್ಯಕ್ಷ ಪ್ರದೀಪ್ ಸಣ್ಣಾರ ಮತ್ತು ನವಜೀವನ ಸ್ಪೋರ್ಟ್ಸ್ ಮತ್ತು ಆಟ್ಸ್ ಕ್ಲಬ್ನ ಉಪಾಧ್ಯಕ್ಷ ಪ್ರಕಾಶ್ ಪೊಂಬೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನವಜೀವನ ಸ್ಪೋಟ್ಸ್ ಮತ್ತು ಆಟ್ಸ್ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಗುಂಡ್ಯ ವಿಜೇತ ಮಕ್ಕಳಿಗೆ ಸ್ಮರಣಿಕೆಗಳನ್ನು ನೀಡಿ ಸಹಕರಿಸಿದರು.ಎಸ್‌ ಡಿ ಎಮ್‌ ಸಿ ಯ ಮಾಜಿ ಅಧ್ಯಕ್ಷ ವಿನೇಶ್ ಕುಮಾರ್, ನಿವೃತ್ತ ಮುಖ್ಯ ಗುರು ಸುಮತಿ ಪಿ, ಶಾರದಾ ಕೇಶವ, ದೈಹಿಕ ಶಿಕ್ಷಣ ಶಿಕ್ಷಕ/ಶಿಕ್ಷಕಿಯರು,ಕ್ರೀಡಾ ಪಟುಗಳು, ಊರಿನ ಕ್ರೀಡಾಭಿಮಾನಿಗಳು,ಹಿರಿಯ ವಿದ್ಯಾರ್ಥಿಗಳು ಮತ್ತು ಮಕ್ಕಳ ಪೋಷಕರು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. , ಶಿಕ್ಷಕಿ ಶ್ರೀಮತಿ ಸುನಂದ ಬಿ ಸ್ವಾಗತಿಸಿ, ದೈ ಶಿ ಶಿಕ್ಷಕ ಚಂದ್ರಶೇಖರ್ ಎ ವಂದಿಸಿ ಲತಾ ಶಿಕ್ಷಕಿ ಸಹಕರಿಸಿದರು.ದಮಯಂತಿ ಜಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here