ಪಡುಮಲೆ ಮರಾಟಿ ಸೇವಾ ಸಂಘದ ನೂತನ ಪದಾಧಿಕಾರಿಗಳ ಅಯ್ಕೆ

0

ಅಧ್ಯಕ್ಷರಾಗಿ ಅಪ್ಪಯ್ಯ ನಾಯ್ಕ ತಲೆಂಜಿ, ಕಾರ್ಯದರ್ಶಿಯಾಗಿ ನಾರಾಯಣ ನಾಯ್ಕ ಪೇರಾಲು ,ಕೋಶಾಧಿಕಾರಿಯಾಗಿ ಶ್ರೀಧರ ನಾಯ್ಕ ನೆರ್ಲಪ್ಪಾಡಿ


ಬಡಗನ್ನೂರುಃ ಪಡುಮಲೆ ಮರಾಟಿ ಸೇವಾ ಸಂಘದ  ನೂತನ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಅ.15 ರಂದು ವೈ.ಕೆ ನಾಯ್ಕ ಪಟ್ಟೆ ಇವರ ಮನೆಯಲ್ಲಿ ನಡೆಯಿತು. ನೂತನ  ಅಧ್ಯಕ್ಷರಾಗಿ ಅಪ್ಪಯ್ಯ ನಾಯ್ಕ ತಲೆಂಜಿ, ಕಾರ್ಯದರ್ಶಿಯಾಗಿ ನಾರಾಯಣ ನಾಯ್ಕ ಪೇರಾಲು ಇವರನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಗೋಪಾಲ ನಾಯ್ಕ ದೊಡ್ಡಡ್ಕ, ಜತೆ ಕಾರ್ಯದರ್ಶಿಯಾಗಿ ಜಯಂತಿ ಮೋಡಿಕೆ, ಕೋಶಾಧಿಕಾರಿಯಾಗಿ ಶ್ರೀಧರ ನಾಯ್ಕ ನೆರ್ಲಪ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.

ಅಧಿಕಾರ ಹಸ್ತಾಂತರ;-
ಪಡುಮಲೆ ಮರಾಟಿ ಸೇವಾ ಸಂಘದ ಅಧ್ಯಕ್ಷ ಕೇಶವ ಪ್ರಸಾದ್ ನೀಲಗಿರಿ, ಕಾರ್ಯದರ್ಶಿ ನಿತಿನ್ ಕಾರ್ಯದರ್ಶಿ ಸುಂದರ ನಾಯ್ಕ ತಲೆಂಜಿ ನೂತನ ಸಮಿತಿ ಅಧ್ಯಕ್ಷ  ಅಪ್ಪಯ್ಯ ನಾಯ್ಕ, ಕಾರ್ಯದರ್ಶಿ ನಾರಾಯಣ ನಾಯ್ಕ, ಕೋಶಾಧಿಕಾರಿ ಶ್ರೀಧರ ನಾಯ್ಕ ರವರೆಗೆ ನಿರ್ಣಯ ಪುಸ್ತಕ ಮತ್ತು ಬ್ಯಾಂಕ್ ಖಾತೆ ಪುಸ್ತಕ ಹಸ್ತಾಂತರ ಮಾಡಿದರು.

ನೂತನ ಸಮಿತಿ ಅಧ್ಯಕ್ಷ ಅಧಿಕಾರ ಸ್ವೀಕರಿಸಿ , ಮಾತನಾಡಿ , ಸಂಘದ ಅಭಿವೃದ್ಧಿ ಕೇವಲ ಅಧ್ಯಕ್ಷರಿಂದ ಸಾಧ್ಯವಿಲ್ಲ ತಮ್ಮೆಲ್ಲರ ಸಹಕಾರ ಅಗತ್ಯ ಎಲ್ಲರೂ ಒಟ್ಟಾಗಿ ಸೇರಿ ಸಂಘವನ್ನು ಬೆಳೆಸುವ ಎಂದು ಹೇಳಿ ಸಹಕಾರಯಾಚಿದರು.

LEAVE A REPLY

Please enter your comment!
Please enter your name here