ಕಡಬ ವಿ.ಹಿಂ.ಪವತಿಯಿಂದ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕಡಬ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಕಡಬ ಪ್ರಖಂಡ ವತಿಯಿಂದ ಸೆ.10 ರಂದು ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಳದ ಸನ್ನಿದಿಯಲ್ಲಿ ನಡೆಯುವ 6 ನೇ ವರ್ಷದ ಕಡಬ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಡಬದ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು.50 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಿರೀಶ್ ಎ ಪಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ವಿವರ ತಿಳಿಸಿದರು.

ಈ ಸಂದರ್ಭದಲ್ಲಿ ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಜಯಂತ ಕಲ್ಲುಗುಡ್ಡೆ , ಸಹ ಕಾರ್ಯದರ್ಶಿ ಪ್ರಮೀಳಾ ಲೋಕೇಶ್, ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ, ವಿಹಿಂಪ ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್ ಮಾಣಿ, ಜಿಲ್ಲಾ ಸಹ ಸತ್ಸಂಗ ಪ್ರಮುಖ್ ರಾಜಾರಾಮ್ ಐತಲ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್,ಜಿಲ್ಲಾ ಧರ್ಮಪ್ರಸಾರ ಸಹ ಪ್ರಮುಖ್ ಉಮೇಶ್ ಆಚಾರ್ಯ ಗೊಳಿಯಡ್ಕ, ಬಜರಂಗದಳ ಕಡಬ ಪ್ರಖಂಡ ಸಂಯೋಜಕ ರಾಜೇಶ್ ಉದನೆ, ದುರ್ಗಾವಾಹಿನಿ ಸಂಯೋಜಕಿ ದೇವಕಿ ಪೂವಲ, ಮಾತೃಶಕ್ತಿ ಪ್ರಮುಖ್ ಪ್ರೇಮಲತಾ ಕೇಪುಂಜ, ಸಹ ಪ್ರಮುಖ್ ವೀಣಾ ಕೊಲ್ಲೆಸಾಗು,ವಿಹಿಂಪ ನಗರ ಅಧ್ಯಕ್ಷ ಸತ್ಯನಾರಾಯಣ ಹೆಗ್ಡೆ ನಡುಮಜಲು, ಬಜರಂಗದಳ ಕಡಬ ನಗರ ಸಂಯೋಜಕ ತುಳಸಿಧರ ಬೈದ್ರಿಜಾಲ್ಪ್ರ ಮುಖರಾದ ಪ್ರಕಾಶ್ ಎನ್.ಕೆ, ವಿನಯ ಕೋಲ್ಪೆ, ವಿಘ್ನೇಶ್ ಕೊಠಾರಿ, ಬಾಲಕೃಷ್ಣ ಡಿ ಕೋಲ್ಪೆ, ಸೀತಾರಾಮ ಗುರುಕೃಪಾ, ಸದಾನಂದ, ಜಗನ್ನಾಥ ರೈ ಗುಂಡಿಜಾಲು ಬಲ್ಯ , ರಘುರಾಮ ನಾಯ್ಕ್, ಕೃಷ್ಣ ಅಲಂಗೂರು , ಪ್ರಮೋದ್ ರೈ ನಂದುಗುರಿ ಮೊದಲಾದವರು ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here