ಸವಣೂರು ಅನ್ಸಾರುಲ್ ಮುಸ್ಲಿಂ ಯೂತ್ ಪೇಡರೇಶನ್ ಶಾಂತಿನಗರ ವತಿಯಿಂದ 77ನೇ ಸ್ವಾತಂತ್ರ ದಿನಾಚರಣೆ

0

ಪುತ್ತೂರು:ಸವಣೂರು ಅನ್ಸಾರುಲ್ ಮುಸ್ಲಿಂ ಯೂತ್ ಪೇಡರೇಶನ್ ಶಾಂತಿನಗರ ಇದರ ವತಿಯಿಂದ 77ನೇ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷ ಅಶ್ರಫ್ ಉರ್ಸಾಗ್ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸ್ಜಿದ್ ಚಾಪಲ್ಲ ಅಧ್ಯಕ್ಷ ಉಮ್ಮರ್ ಹಾಜಿ ಕೆನರಾ ವಹಿಸಿದ್ದರು .

ಮುಖ್ಯ ಅತಿಥಿಯಾಗಿ ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಝಕ್ ಕೆನರಾ ಮಾತನಾಡಿ ಸ್ವಾತಂತ್ರಕ್ಕಾಗಿ ಹೋರಾಡಿ ಹುತಾತ್ಮರಾದ ಟಿಪ್ಪು ಸುಲ್ತಾನ್ ತನ್ನ 2ಮಕ್ಕಳನ್ನು ಒತ್ತೆ ಇಟ್ಟು ಈ ದೇಶಕ್ಕಾಗಿ ಹೋರಾಡಿದರು ಎಂದರು.ಗ್ರಾಮ ಪಂಚಾಯತ್ ಸದಸ್ಯರಾದ ರಫೀಕ್ ಎಂ ಮಾತನಾಡಿ ಬಹದ್ದೂರು ಷಾ ಜಾಫರ್ ಕುಂಜಲಿ ಮಲಕ್ಕಾರ್ ಹಾಗೂ ಇನ್ನಿತರ ಮುಸಲ್ಮಾನ್ ಸಮುದಾಯ ಸ್ವತಂತ್ರಕ್ಕಾಗಿ ಹೋರಾಡಿದರು ಎಂದರು. ವೇದಿಕೆಯಲ್ಲಿ ಆಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಚಾಪಲ್ಲ ಅಧ್ಯಕ್ಷ ಝಕರಿಯ ಮಂತೂರ್ ಉಪಸ್ಥಿತರಿದ್ದರು .ಅಶ್ರಫ್ ಜನತಾ ಸ್ವಾಗತಿಸಿ ,ವಂದಿಸಿದರು .

LEAVE A REPLY

Please enter your comment!
Please enter your name here