ಆಲಂಕಾರು ಕಯ್ಯಪ್ಪೆ ನಾಗಬನದಲ್ಲಿ ನಾಗರಪಂಚಮಿ

0

ಆಲಂಕಾರು: ಕಯ್ಯಪ್ಪೆ ಮನೆತನದ ನೈಯ್ಯಲ್ಗ ಕರ್ಕೇರ ಕುಟುಂಬಸ್ಥರ ಮೂಲ ನಾಗರಾಧನೆಯು ಪ್ರತಿವರ್ಷದಂತೆ ಕಯ್ಯಪ್ಪೆ ನಾಗಬನದಲ್ಲಿ ಆ.21ರಂದು ಕುಟುಂಬಸ್ಥರ ಮತ್ತು ಬಂಧು ಬಾಂಧವರ ಕೂಡುವಿಕೆಯೊಂದಿಗೆ ವೇದಮೂರ್ತಿ ಅನಂತರಾಮ ಭಟ್ ತೋಟಂತಿಲರವರ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಕುಟುಂಬಸ್ಥರ ಪರವಾಗಿ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಇವರ ಸಮ್ಮುಖದಲ್ಲಿ ನಡೆದ ತಂಬಿಲ ಸೇವೆಯಲ್ಲಿ ಭಕ್ತಾದಿಗಳು ಆಯುರಾರೋಗ್ಯ, ಸುಖ,ನೆಮ್ಮದಿ ಸಕಲೈಶ್ವರ್‍ಯ ಇನ್ನಷ್ಟು ಮೂಡಿಬರಲಿ ಎಂದು ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here