ಎಂ.ಬಿ. ಲೋಕೇಶ್ ಮುರುಳ್ಯ ನಿಧನ

0

ಪುತ್ತೂರು: ಮುರುಳ್ಯ ಮನೆತನದ ದಿವಂಗತ ಬೆಳ್ಳಿಯಪ್ಪ ಗೌಡರ ಪುತ್ರ ಲೋಕೇಶ್ (68.ವ) ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವಿವಾಹಿತರಾಗಿದ್ದ ಅವರು, ಪ್ರಗತಿಪರ ಕೃಷಿಕರಾಗಿ, ಸಮಾಜಮುಖಿಯಾಗಿ, ಪಂಜ ದೇವಸ್ಥಾನ ಸೇರಿದಂತೆ ಊರಿನ ಧಾರ್ಮಿಕ ಕ್ಷೇತ್ರಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.

ಮೃತರು ಸಹೋದರರಾದ ವಸಂತ ಕುಮಾರ್ ಮುರುಳ್ಯ, ಸುರೇಶ್ ಕುಮಾರ್, ದಿನೇಶ್ ಕುಮಾರ್ ಎಂ. ಬಿ. ಮುರುಳ್ಯ, ದಿವಿಶ್ ಕುಮಾರ್ ಮುರುಳ್ಯ, ಸಹೋದರಿಯರಾದ ದುರ್ಗಾದೇವಿ ಮುಂಗುಲಿ ಮನೆ ಪುತ್ತೂರು, ಶ್ರೀಮತಿ ಭಾಗ್ಯಲಕ್ಷ್ಮಿ ದಿವಾಕರ ಶಿವಮೊಗ್ಗ, ಹಾಗೂ ಮುರುಳ್ಯ ಮನೆತನದ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here