ಕಾಸರಗೋಡಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಶಾಸಕರಿಗೆ ಮನವಿ

0

ಪುತ್ತೂರು: ಪುತ್ತೂರು- ಬಡಗನ್ನೂರು- ಸುಳ್ಯಪದವು ಮಾರ್ಗವಾಗಿ ಕಾಸರಗೋಡಿಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರುವರು ಪುತ್ತೂರು ಶಾಸಕರಾದ ಅಶೋಕ್ ರ್‍ಯ ಅವರಿಗೆ ಮನವಿ ಸಲ್ಲಿಸಿದರು.


ಕಳೆದ ಎಂಟು ವರ್ಷಗಳ ಹಿಂದೆ ಈ ಮಾರ್ಗವಾಗಿ ಓಡಾಟ ನಡೆಸುತ್ತಿದ್ದ ಬಸ್ಸನ್ನು ಯಾವುದೇ ಸೂಚನೆಯಿಲ್ಲದೆ ನಿಲ್ಲಿಸಲಾಗಿತ್ತು. ಬಸ್ ಸಂಚಾರ ಇರುವುದರಿಂದ ಪುತ್ತೂರಿನಿಂದ ಕಾಸರಗೋಡು ಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ರಸ್ತೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಿತ್ತು. ಈಗ ರಸ್ತೆ ಉತ್ತಮವಾಗಿದ್ದು ಬಸ್ ಸಂಚಾರವನ್ನು ಪುನರಾರಂಭ ಮಾಡುವಂತೆ ಶಾಸಕರಿಗೆ ನೀಡಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.


ಗ್ರಾಪಂ ಸದಸ್ಯರುಗಳಾದ ರವಿರಾಜ್ ರೈ ಸಜಂಕಾಡಿ, ಶ್ರೀಮತಿ, ದರ್ಮೇಂದ್ರ ಪದಡ್ಕ, ಬೂತ್ ಅಧ್ಯಕ್ಷರಾದ ಅನ್ವರ್ ಪಾಲಕೊಚ್ಚಿ, ಕರೀಂ ಪಿಲಿಕ್ಕುಡೆ, ಅಬ್ದುಲ್ ಖಾದರ್ ಸುಳ್ಯಪದವು, ಕೃಷ್ಣ ಮುಡಿಪಿನಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here