ಕೆಯ್ಯೂರು ಶ್ರೀ ಮಹಿಷ ಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಗರ ಪಂಚಮಿ

0

ಕೆಯ್ಯೂರು : ಶ್ರೀ ಮಹಿಷ ಮರ್ದಿನಿ ದುರ್ಗಾ ಪರಮೇಶ್ವರಿ ದೇವಾಸ್ಥಾನದಲ್ಲಿ ಆ.21ರಂದು ನಾಗರ ಪಂಚಮಿ ಉತ್ಸವ ನಡೆಯಿತು. ದೇವಸ್ಥಾನದ ನಾಗ ಪ್ರತಿಷ್ಠೆ ಮಂಟಪದ ಬಳಿ ಇರುವ ನಾಗನ ಮೂರ್ತಿಗೆ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ್ ರಾವ್, ಹಿಂಗಾರ, ಹಾಲು, ಬೆಲ್ಲ,  ಸೀಯಾಳ,ಜೇನುತುಪ್ಪ, ಸಕ್ಕರೆ, ಅಭಿಷೇಕ ಮಾಡಿ ಹೂವುಗಳಿಂದ ಶೃಂಗರಿಸಿ ಆರತಿ ಬೆಳಗಿದರು. ಮಧುಸೂದನ್ ಭಟ್ ಕಜೆಮೂಲೆ ಸಹಕರಿಸಿದರು. ಈ ಸಂದರ್ಭದಲ್ಲಿ  ‌ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಶಶಿಧರ ರಾವ್ ಬೊಳಿಕಲ,  ಸದಸ್ಯರುಗಳು, ‌ಭಕ್ತಾಧಿಗಳು, ಉತ್ಸವದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here