ಪಡೀಲು ಮೂರ್ತೆದಾರರ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

0

ಅಧ್ಯಕ್ಷರಾಗಿ ಸುಂದರ ಪೂಜಾರಿ ಬಡಾವು, ಉಪಾಧ್ಯಕ್ಷರಾಗಿ ಬಿ.ಕೆ ಆನಂದ ಸುವರ್ಣ ಬಪ್ಪಳಿಗೆ

ಪುತ್ತೂರು: ಪಡೀಲಿನಲ್ಲಿರುವ ಪುತ್ತೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಅಧ್ಯಕ್ಷರಾಗಿ ನಗರ ಸಭಾ ಸದಸ್ಯರಾಗಿರುವ ಬಾಳಪ್ಪ ಯಾನೆ ಸುಂದರ ಪೂಜಾರಿ ಬಡಾವುರವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆನಂದ ಸುವರ್ಣ ಬಿ.ಕೆ ಬಪ್ಪಳಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಆ.23ರಂದು ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ಸುಂದರ ಪೂಜಾರಿಯವನ್ನು ಚಂದಪ್ಪ ಪೂಜಾರಿಯವರು ಸೂಚಿಸಿ, ಜಿನ್ನಪ್ಪ ಪೂಜಾರಿ ಅನುಮೋದಿಸಿದ್ದರು. ಉಪಾಧ್ಯಕ್ಷ ಆನಂದ ಸುವರ್ಣರವರನ್ನು ಗೋಪಾಲಕೃಷ್ಣ ಸುವರ್ಣ ಸೂಚಿಸಿ, ಜಯಲಕ್ಷ್ಮೀ ಸುರೇಶ್ ಅನುಮೋದಿಸಿದ್ದರು. ನಿರ್ದೇಶಕ ಪದ್ಮಪ್ಪ ಪೂಜಾರಿ ಎಂ ಮತಾವು, ವೀರಪ್ಪ ಪೂಜಾರಿ ಡೆಕ್ಕಾಜೆ, ಉಮೇಶ್ ಬಿ. ಬಡಕಾಯಿದೆ, ಶಯನಾ ಜಯಾನಂದ ಕೋಡಿಂಬಾಡಿ ಉಪಸ್ಥಿತರಿದ್ದರು.

ನಿರ್ದೇಶಕ ಸ್ಥಾನಕ್ಕೂ ಅವಿರೋಧ ಆಯ್ಕೆ:
ಸಂಘದಲ್ಲಿ ಒಟ್ಟು 10 ನಿರ್ದೇಶಕ ಸ್ಥಾನಗಳಿದ್ದು ಸಾಮಾನ್ಯ ಕ್ಷೇತ್ರದಿಂದ ಚಂದಪ್ಪ ಪೂಜಾರಿ ಕಾಡ್ಲ, ಬಾಳಪ್ಪ ಯಾನೆ ಸುಂದರ ಪೂಜಾರಿ ಬಡಾವು, ಆನಂದ ಸುವರ್ಣ ಬಿ.ಕೆ ಬಪ್ಪಳಿಗೆ, ಜಿ.ಗೋಪಾಲಕೃಷ್ಣ ಸುವರ್ಣ ಗೆಣಸಿನಕುಮೇರು, ಪದ್ಮಪ್ಪ ಪೂಜಾರಿ ಎಂ ಮತಾವು, ವೀರಪ್ಪ ಪೂಜಾರಿ ಡೆಕ್ಕಾಜೆ, ಉಮೇಶ್ ಬಿ. ಬಡಕಾಯಿದೆ, ಮಹಿಳಾ ಮೀಸಲು ಕ್ಷೇತ್ರದಿಂದ ಜಯಲಕ್ಷ್ಮೀ ಕೇಪುಳು, ಶಯನಾ ಜಯಾನಂದ ಕೋಡಿಂಬಾಡಿ ಹಾಗೂ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಕೆ. ಜಿನ್ನಪ್ಪ ಪೂಜಾರಿ ಮುರ ಇವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದರು.
ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ವಿಲಾಸ್ ಚುನಾವಣಾಧಿಕಾರಿಯಾಗಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಅರ್ಕ, ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಾಹಕರು ಸಹಕರಿಸಿದರು.

LEAVE A REPLY

Please enter your comment!
Please enter your name here