ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ತಂಡದಿಂದ ʼಅಪ್ಪೆʼ ತುಳು ಹಾಸ್ಯಮಯ ನಾಟಕಕ್ಕೆ ಮಹೂರ್ತ

0

ಪುತ್ತೂರು: ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಪುತ್ತೂರು ತಂಡದಿಂದ `ಅಪ್ಪೆ’ ಎಂಬ ತುಳು ಹಾಸ್ಯಮಯ ನಾಟಕದ ಮಹೂರ್ತ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಿತು. ರೋಹಿತ್ ಕೋಟ್ಯಾನ್ ಶಿಬರ ನಿರ್ಮಾಣದ ಗಣೇಶ್ ಪೂಜಾರಿ ಆಲಂಗ ಸಾರಥ್ಯದ ತುಳಶ್ರೀ ರಮಾ ಬಿ ಸಿ ರೋಡು ಸಲಹೆ ಸಹಕಾರದೊಂದಿಗೆ ಕುಸಾಲ್ದ ಮುತ್ತು ಅರುಣ್ ಚಂದ್ರ ಬಿ ಸಿ ರೋಡು ರಚನೆ ಮತ್ತು ನಿರ್ದೇಶನದ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ಅಭಿನಯಿಸಿದ್ದಾರೆ.

ಈ ಸಂದರ್ಭದಲ್ಲಿ ಕುಸಾಲ್ದ ಮುತ್ತು ಅರುಣ್ ಚಂದ್ರ ಬಿ ಸಿ ರೋಡ್, ರಂಗ್‌ದ ರಾಜೇ ಸುಂದರ್ ರೈ ಮಂದಾರ ಹಾಗೂ ಚಲನ ಚಿತ್ರ ನಿರ್ದೇಶಕ ಪ್ರಜ್ವಲ್ ಅತ್ತಾವರ ಭಾಗವಹಿಸಿ ಶುಭಕೋರಿದರು. ಈ ತಂಡದ ಸಮಗ್ರ ನಿರ್ವಹಣೆಯನ್ನು ಸುಧಾಕರ ಕುಲಾಲ್ ನಡುವಾಲ್, ಜಗದೀಶ್ ಪೂಜಾರಿ ಶಿಬರ, ಪ್ರಕಾಶ್ ಪೂಜಾರಿ ಶಿಬರ, ಸಂತೋಷ್ ಜೋಗಿ ನಡುಗುಡ್ಡೆ ವಹಿಸಿದ್ದು ಕಲಾವಿದರಾದ ಶೇಷಪ್ಪ ಪೂಜಾರಿ, ಸತೀಶ್ ಜಾಲ್ಸೂರು, ಸತೀಶ್ ಜೋಗಿ, ಶ್ರೀಮಂತ್, ದಿನೇಶ್, ಜಾಲ್ಸೂರು, ಚೇತನ್ ಪಂಜ, ಚೇತನ್ ಮೊಟ್ಟೆತಡ್ಕ, ಮಲ್ಲಿಕಾ, ವಾಣಿ, ತ್ರಿಷಾ, ವಿದ್ಯಾ ಹಾಗೂ ಮಾಸ್ಟರ್ ಧನ್ವಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here