ಸೆ.30:ಆಹ್ವಾನಿತ ತಂಡಗಳ ನಾಕೌಟ್ ಮಾದರಿಯ ಪ್ರೊ ಕಬಡ್ಡಿ-ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಭೆ

0

ಪುತ್ತೂರು: ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ವತಿಯಿಂದ ಗಣೇಶೋತ್ಸವದ ಸಲುವಾಗಿ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ದಿ.ಉದಯ ಚೌಟರವರ ಸ್ಮರಣಾರ್ಥ ಮ್ಯಾಟ್ ಅಂಕಣದಲ್ಲಿ ಸೆ.30 ರಂದು ನಡೆಯುವ ಪ್ರೊ ಕಬಡ್ಡಿ ಮಾದರಿಯ ಆಹ್ವಾನಿತ ತಂಡಗಳ ಕಬಡ್ಡಿ ಪಂದ್ಯಾಟದ ಪೂರ್ವಭಾವಿ ಸಭೆಯು ಆ.23 ರಂದು ದರ್ಬೆ ನಿರೀಕ್ಷಣ ಮಂದಿರದ ಬಳಿ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

12 ಬಲಿಷ್ಟ ತಂಡಗಳ ಹಣಾಹಣಿ:
ಕಿಲ್ಲೆ ಮೈದಾನದಲ್ಲಿ ಮ್ಯಾಟ್ ಅಂಕಣದಲ್ಲಿ ನಡೆಯಲಿರುವ ಆಹ್ವಾನಿತ ತಂಡಗಳ ಪ್ರೊ ಕಬಡ್ಡಿ ಅಹರ್ನಿಶಿ ಪಂದ್ಯಾಟವು 2023ನೇ ಸೆ.30 ರಂದು ನಡೆಸಲಾಗುವುದು ಜೊತೆಗೆ ಪಂದ್ಯಾಟದ ಹಿರಿಮೆಯನ್ನು ಹೆಚ್ಚಿಸಲು ಪ್ರದರ್ಶನ ಪಂದ್ಯಾಟವನ್ನೂ ನಡೆಸಲಾಗುವುದು. ಈ ಪಂದ್ಯಾಕೂಟದಲ್ಲಿ ಆಹ್ವಾನಿತ ಬಲಿಷ್ಟ 12 ತಂಡಗಳು ಭಾಗವಹಿಸಲಿವೆ ಎಂದು ಸಭೆಯಲ್ಲಿ ತೀರ್ಮಾನ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ಗಣ್ಯಾತಿಗಣ್ಯರನ್ನು ಕರೆಯಿಸುವ ಬಗ್ಗೆ ಚರ್ಚಿಸಲಾಯಿತು.


ಪ್ರೊ ಕಬಡ್ಡಿ ಆಟಗಾರರು ಭಾಗಿ:
ನಾಕೌಟ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರೊ ಕಬಡ್ಡಿಯ ಪ್ರಖ್ಯಾತ ಆಟಗಾರರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಕಬಡ್ಡಿ ಪಂದ್ಯಾಟ ಜರಗಲಿದೆ. ಈ ಬಾರಿಯೂ ಕ್ರೀಡಾಭಿಮಾನಿಗಳ ಪ್ರೋತ್ಸಾಹವನ್ನು ನಿರೀಕ್ಷೆ ಮಾಡುತ್ತಾ ಕಬಡ್ಡಿ ಪಂದ್ಯಾಟವನ್ನು ಆಯೋಜಿಸಲಾಗುತ್ತಿದ್ದು, ಕಬಡ್ಡಿ ಕ್ರೀಡಾಭಿಮಾನಿಗಳು ಆಶೀರ್ವದಿಸಬೇಕಾಗಿದೆ ಎಂದು ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿರವರು ಸಭೆಯಲ್ಲಿ ಹೇಳಿದರು.


ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ ನೇಸರ, ಪಂದ್ಯಾಟ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಶಿವರಾಂ ಆಳ್ವ, ಶಶಿಕಿರಣ್ ರೈ ನೂಜಿಬೈಲು, ರೋಶನ್ ರೈ ಬನ್ನೂರು, ಕಬಡ್ಡಿ ಕೋಚ್ ಹಬೀಬ್ ಮಾಣಿ, ಪುರುಷೋತ್ತಮ್ ಕೋಲ್ಫೆ, ರಫೀಕ್ ಎಂ.ಕೆ, ಸುರೇಶ್ ಪೂಜಾರಿ, ಸತ್ಯನಾರಾಯಣ ರೈ, ಸದಾಶಿವ ಶೆಟ್ಟಿ ಪಟ್ಟೆ, ನವನೀತ್ ಬಜಾಜ್, ರಂಜಿತ್ ಬಂಗೇರ,ವಿಜಿತ್ ತಂಬುತ್ತಡ್ಕ, ವಿಕ್ರಂ ಶೆಟ್ಟಿ ಅಂತರ, ಗಂಗಾಧರ ಶೆಟ್ಟಿ ಕೈಕಾರ, ಅಬ್ದುಲ್ ರಝಾಕ್, ಧರೇಶ್ ಹೊಳ್ಳ, ಸಿದ್ಧೀಕ್ ತಂಬುತ್ತಡ್ಕ, ಹೊನ್ನಪ್ಪ ಗೌಡ ಓಜಾಳ, ಪ್ರದೀಪ್ ಶೆಟ್ಟಿ ಅಳಕೆಮಜಲು, ಪ್ರವೀಣ್ ಶೆಟ್ಟಿ ಅಳಕೆಮಜಲು, ಸುಮಿತ್ ಶೆಟ್ಟಿ ಮೂಡಾಯಿಮಾರು, ಸುಶಾಂತ್ ಶೆಟ್ಟಿ ಮೂಡಾಯಿಮಾರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ ಸ್ವಾಗತಿಸಿ, ರೆಫ್ರೀ ಬೋರ್ಡ್ ಅಧ್ಯಕ್ಷ ಆಸಿಫ್ ತಂಬುತ್ತಡ್ಕ ವಂದಿಸಿದರು.


ಮೌನ ಪ್ರಾರ್ಥನೆ..
ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಹಿತೈಷಿಯಾಗಿದ್ದು, ಆ.23 ರಂದು ಹೃದಯಾಘಾತದಿಂದ ಅಗಲಿದ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸೀತಾರಾಮ ಶೆಟ್ಟಿ ಕಂಬಳತ್ತಡ್ಡರವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

-ಬಲಿಷ್ಟ 12 ತಂಡಗಳ ಹಣಾಹಣಿ
-ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸಲು ವಿಶಾಲ ಗ್ಯಾಲರಿ ವ್ಯವಸ್ಥೆ
-ಪ್ರೊ ಕಬಡ್ಡಿ ಆಟಗಾರರು ಭಾಗಿ
-ಪ್ರದರ್ಶನ

LEAVE A REPLY

Please enter your comment!
Please enter your name here