ಆ.27: ಗಾಯಕ ಪುತ್ತೂರು ಜಗದೀಶ್ ಆಚಾರ್ಯರವರ ದಾಸರ ಪದ ವಿಡಿಯೋ ಆಲ್ಪಂ ಬಿಡುಗಡೆ

0

ಪುತ್ತೂರು: ಈ ಭಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಾಡಿನ ಎಲ್ಲಾ ಭಗವತ್ ಭಕ್ತರಿಗಾಗಿ ಪುತ್ತೂರು ಜಗದೀಶ್ ಆಚಾರ್ಯ ತಂಡದಿಂದ ವಿಶೇಷವಾದ ಭಜನೆ ಹಾಗೂ ಕುಣಿತ ಭಜನೆಗಾಗಿ ನಿರ್ಮಿತವಾದ ಹೊಸ ದಾಸರ ಪದ ವಿಡಿಯೋ ಆಲ್ಬಂ ಆ.27ರಂದು ‘ಜಗದೀಶ್ ಪುತ್ತೂರು’ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ.


ಸುಪ್ರೀತ ಮತ್ತು ಶ್ರೀ ಭರತ್ ಶೆಟ್ಟಿಗಾರ್ ಹಾಗೂ ಮಾ| ಚಿರಾಗ್ ಸುರತ್ಕಲ್ ಇವರ ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಭಕ್ತಿಗೀತೆ ಹಾಡಿನ ಸಂಗೀತ ನಿರ್ದೇಶಕರಾಗಿ ಮತ್ತು ಗಾಯಕರಾಗಿ ಪುತ್ತೂರು ಜಗದೀಶ್ ಆಚಾರ್ಯ ಹಾಗೂ ಸಹ ಗಾಯಕಿಯರಾಗಿ ಸಮನ್ವಿ ರೈ ಮದಕ, ಜನ್ಯ ಪ್ರಸಾದ್ ಅನಂತಾಡಿ, ಅಶ್ವಿನಿ ಕೋಳಿಕ್ಕಜೆ, ತನುಶ್ರೀ ಮಂಗಳೂರು, ವೈಷ್ಣವಿ ಐ ಎಂ ಮಂಗಳೂರು, ದಿವ್ಯನಿಧಿ ರೈ ಎರುಂಬು ಅವರು ಸಹಕರಿಸಿದ್ದು, ಸಾಹಿತ್ಯ ಆಚಾರ್ಯ ಪುತ್ತೂರು ಹಾಗೂ ಪುಟಾಣಿ ಕೃಷ್ಣನ ಪಾತ್ರದಲ್ಲಿ ಅವೀಶ್ ಎಸ್ ಶೆಟ್ಟಿ ಬಿಕರ್ನಕಟ್ಟೆ ಮಂಗಳೂರು, ಧನಿಶ್ಕ ,ಕೋಡಿಕೆರೆ ,ಸುರತ್ಕಲ್, ಸಾನಿಕ ಎಸ್ ಕಿದಿಯೂರು, ಮೇಹ ರೈ ,ಪುತ್ತೂರು, ಅರುಶಿ, ಉಜಿರೆ, ಚುಕ್ಕಿ ವಿಟ್ಲ ಭಾಗವಹಿಸಿದ್ದಾರೆ. ಛಾಯಗ್ರಹಣ ಅರುಣ್ ರೈ, ಸಂಕಲನ ಚರಣ್ ಆಚಾರ್ಯ, ವೈಟಿ ಶಿಶಿರ್ ರೈ ಚೆಲ್ಯಡ್ಕ ನಿರ್ವಹಿಸಿದ್ದಾರೆ. ಈ ವಿಡಿಯೋ ಅಲ್ಬಂ ನಾಡಿನ ಎಲ್ಲಾ ಸಮಸ್ತ ಭಜಕರಿಗಾಗಿ ಅರ್ಪಣೆ ಮಾಡಿದ್ದು, ಕಲಾವಿದರ ಮೇಲೆ ಸಮಾಜದ ಎಲ್ಲಾ ಭಕ್ತರ ಪ್ರೀತಿಯ ಪ್ರೋತ್ಸಾಹ ಮತ್ತು ಸಹಕಾರವನ್ನು ನೀಡಬೇಕಾಗಿ ಪುತ್ತೂರು ಜಗದೀಶ್ ಆಚಾರ್ಯ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here