ಮುರುಳ್ಯ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ- ಧಾರ್ಮಿಕ ಸಭೆ

0

ಸಕಲ ಇಷ್ಟಾರ್ಥ ಸಿದ್ಧಿಗಾಗಿ ಮಾಡುವ ವರಮಹಾಲಕ್ಷ್ಮೀ ವೃತ ಅತ್ಯಂತ ಶ್ರೇಷ್ಠ – ಭಾಗೀರಥಿ ಮುರುಳ್ಯ

ಕಾಣಿಯೂರು: ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಮಹಿಷಮರ್ದಿನಿ ಶ್ರೀ ವರಮಹಾಲಕ್ಷ್ಮಿ ವೃತ ಪೂಜಾ ಸಮಿತಿ, ಮಹಿಷಮರ್ದಿನಿ ಸೇವಾ ಸಮಿತಿ, ಮಹಿಷಮರ್ದಿನಿ ಮಹಿಳಾ ಸೇವಾ ಸಮಿತಿ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಯು ಜರುಗಿತು.
ಧಾರ್ಮಿಕ ಸಭೆ: ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ವರಮಹಾಲಕ್ಷ್ಮಿ ಹಬ್ಬ ಮಹತ್ವವಾದ ಹಬ್ಬ. ಸಕಲ ಇಷ್ಟಾರ್ಥ ಸಿದ್ಧಿಗಾಗಿ ಮಾಡುವ ಈ ವೃತ, ವೃತಗಳಲ್ಲೆ ಅತ್ಯಂತ ಶ್ರೇಷ್ಟ ಎಂದರು. ಶ್ರೀ ದೇವಿ ಸಕಲ ಇಷ್ಟಾರ್ಥವಾ ಅನುಗ್ರಹಿಸಿ, ಎಲ್ಲರ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ವಸಂತ ನಡುಬೈಲು, ಸಂಧ್ಯಾ ಕಾನತ್ತೂರು, ಶಿವಾನಂದ ಬೊಲ್ಕಜೆ, ಗುಣವತಿ ನಾವೂರು ಹಾಗೂ ಸಮಿತಿ ಪದಾಧಿಕಾರಿಗಳು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here