ಪೆರ್ನಾಜೆ: ಇಂಟರ್‌ನೆಟ್ ಕೇಬಲ್ ತುಂಡರಿಸಿ ಹಾನಿ-ದೂರು

0

ಪುತ್ತೂರು: ಇಂಟರ್‌ನೆಟ್ ಕೇಬಲ್ ತುಂಡರಿಸಿ ಹಾನಿಗೊಳಿಸಿರುವ ಘಟನೆಯೊಂದು ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯಲ್ಲಿ ನಡೆದಿದ್ದು ಈ ಬಗ್ಗೆ ಪೊಲೀಸರಿಗೆ ಮೌಖಿಕ ದೂರು ನೀಡಲಾಗಿದೆ.

ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಯ ಸುಮಾರು 12 ಮನೆಯವರು ಒಂದೂವರೇ ವರ್ಷದ ಹಿಂದೆ ಹಣ ಒಟ್ಟುಗೂಡಿಸಿ ಬಿಬಿಎನ್‌ಎಲ್ ಇಂಟರ್‌ನೆಟ್ ಸಂಪರ್ಕ ಪಡೆದುಕೊಂಡಿದ್ದರು. ಕಳೆದ ರಾತ್ರಿ ಯಾರೋ ಅಪರಿಚಿತರು ಇದರ ಕೇಬಲ್ ತುಂಡರಿಸಿ ಹಾನಿಗೊಳಿಸಿದ್ದಾರೆ.

ಈ ಕೇಬಲ್‌ನಿಂದ ಇತ್ತೀಚೆಗೆ ಸ್ಥಳೀಯ ವ್ಯಕ್ತಿಯೋರ್ವರಿಗೆ ಹೊಸದಾಗಿ ಸಂಪರ್ಕ ಕಲ್ಪಿಸುವ ಕುರಿತಂತೆ ಗೊಂದಲ ಉಂಟಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ಆ.26ರಂದು ತಡರಾತ್ರಿ ಪೆರ್ನಾಜೆ ಸಂಪರ್ಕಿಸುವ ರಸ್ತೆಯಿಂದ ಸುಮಾರು ಅರ್ಧ ಕಿ.ಮೀ.ಈಚೆಗೆ ಇಂಟರ್‌ನೆಟ್ ಕೇಬಲ್ ತುಂಡರಿಸಿ ಹಾನಿಗೊಳಿಸಲಾಗಿದೆ. ಇದರಿಂದ ಪೆರ್ನಾಜೆ ಭಾಗಕ್ಕೆ ಇಂಟರ್‌ನೆಟ್ ಸಂಪರ್ಕ ಕಡಿತಗೊಂಡಿದೆ. ಈ ಬಗ್ಗೆ ಸ್ಥಳೀಯರು ಮೌಖಿಕವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತೆರಳಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here