ಪಾಣಾಜೆ; ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ, ಧಾರ್ಮಿಕ ಸಭೆ, ಸನ್ಮಾನ

0

ನಿಡ್ಪಳ್ಳಿ; ಶ್ರೀ ಕಾರ್ತಿಕೇಯ ಮಹಿಳಾ ಭಜನಾ ಮಂಡಳಿ ಆರ್ಲಪದವು ಇದರ ವತಿಯಿಂದ ಪ್ರಥಮ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಅ.25 ರಂದು ಅಪರಾಹ್ನ ಆರ್ಲಪದವು ಶ್ರೀ ದುರ್ಗಾ ಸಭಾಭವನದಲ್ಲಿ ನಡೆಯಿತು.ಧಾರ್ಮಿಕ ಸಭೆಯನ್ನು ಖ್ಯಾತ ದಾಸ ಸಂಕೀರ್ತನಾಕಾರ  ರಾಮಕೃಷ್ಣ ಕಾಟುಕುಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಪ್ರತಿಭಾ ಓಕುಣ್ಣಾಯ ಬೊಳ್ಳಿಂಬಳ ಧಾರ್ಮಿಕ ಉಪನ್ಯಾಸ ನೀಡಿದರು. ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ, ಸದಾಶಿವ ರೈ ಸೂರಂಬೈಲು,ನಿವೃತ್ತ ತೆರಿಗೆ ಇಲಾಖೆ ಅಧಿಕಾರಿ ರಾಮ್ ಕುಮಾರ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಭಾಭವನದ ಮಾಲಕಿ ಶಂಕರಿ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು.

  ಭಜನಾ ಮಂಡಳಿ ಸದಸ್ಯರ ಗುರು ಖ್ಯಾತ ದಾಸ ಸಂಕೀರ್ತನಾಕಾರ ರಾಮಕೃಷ್ಣ ಕಾಟುಕುಕ್ಕೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಭಜನಾ ಮಂಡಳಿ ಕಾರ್ಯದರ್ಶಿ ಸುಜಾತ ಬಟ್ಯ ಮಾಸ್ಟರ್ ಪ್ರಾರ್ಥಿಸಿ, ದುರ್ಗಾಂಭಿಕಾ ಶ್ರೀಧರ ಆಳ್ವ ಸ್ವಾಗತಿಸಿದರು. ಭಜನಾ ಮಂಡಳಿ ಅಧ್ಯಕ್ಷೆ ಶಾರದಾ ಗೋಪಾಲ್ ಕೊಂದಲ್ಕಾನ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಾಣಾಜೆ ಗ್ರಾ.ಪಂ ಉಪಾಧ್ಯಕ್ಷೆ ಜಯಶ್ರೀ.ಡಿ ವಂದಿಸಿದರು. ಸುಪ್ರೀತ ಉದಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ನಂತರ ಪ್ರಸಾದ ವಿತರಣೆ, ಉಪಹಾರದ ವ್ಯವಸ್ಥೆ ನೆರವೇರಿತು. ಉಪಹಾರದ ವ್ಯವಸ್ಥೆಯನ್ನು ಆರ್ಲಪದವಿನ ಜ್ಯೋತಿಷ್ಯರಾದ ಲೋಕೇಶ ಬಲ್ಯಾಯ ದೊಡ್ಡಡ್ಕ ಆಯೋಜಿಸಿದ್ದರು.ಭಜನಾ ಮಂಡಳಿ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here