ಪುಣಚ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆ

0

ಅಧ್ಯಕ್ಷ : ವಿಶ್ವನಾಥ ರೈ ಪರಿಯಾಲು, ಉಪಾಧ್ಯಕ್ಷ : ಪಿ. ವಾಸುದೇವ ಕಾರಂತ

ಪುಣಚ : ಪುಣಚ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳ ಆಯ್ಕೆ ಪ್ರಕ್ರಿಯೆಯು ಆ.29ರಂದು ಸಂಘದಲ್ಲಿ ನಡೆಯಿತು. ಎಲ್ಲಾ 13 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು. ನಿರ್ದೇಶಕರುಗಳಾಗಿ ಎಸ್. ಸುರೇಶ್ ಕುಮಾರ್, ಪುಂಡರಿಕ, ನವೀನ್ ಚಂದ್ರ ಎಂ, ಮದನಪ್ಪ ರೈ, ದಿವಾಕರ ಗೌಡ, ಎಂ. ರವೀಂದ್ರ ಪೂಜಾರಿ, ದಿನೇಶ ಶೆಟ್ಟಿ, ಎಸ್. ಸುಜಾತ, ಸೀತಾ ವೀರಪ್ಪ ಗೌಡ, ಅಣ್ಣು ನಲಿಕೆ ಹಾಗೂ ಶೇಸಪ್ಪ ನಾಯ್ಕರವರು ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ:
ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಎರಡನೇ ಅವಧಿಗೆ ವಿಶ್ವನಾಥ್ ರೈ ಪರಿಯಾಲು, ಉಪಾಧ್ಯಕ್ಷರಾಗಿ ಪಿ. ವಾಸುದೇವ ಕಾರಂತರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಎನ್. ಜೆ. ಗೋಪಾಲ್, ಪ್ರವೀಣ್ ಸರಳಾಯ, ಸುರೇಶ ಒ, ಕೃಷ್ಣ ಭಟ್ ಸಹಕರಿಸಿದರು. ರಾಮಕೃಷ್ಣ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಸಂಘದ ಕಾರ್ಯದರ್ಶಿ ಗೋಪಾಲ ಸ್ವಾಗತಿಸಿ, ವಿಷು ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here