ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರದಲ್ಲಿ ರಕ್ಷಾ ಬಂಧನ

0

ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದ ಶ್ರೀ ಮಾಧವ ಶಿಶು ಮಂದಿರದಲ್ಲಿ ಬುಧವಾರದಂದು ರಕ್ಷಾಬಂಧನ ಉತ್ಸವ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರ ಸೇವಕ ಸಮಿತಿಯ ಕಡಬ ತಾಲೂಕು ಕಾರ್ಯವಾಹಕ ಪೂರ್ಣಿಮಾ ಮಾತನಾಡಿ, ಸಾಂಘಿಕ, ಮತ್ತು ಸಹೋದರತ್ವ ನಮ್ಮ ಬದುಕಿಗೆ ರಕ್ಷಣೆಯನ್ನು ಒದಗಿಸುತ್ತದೆ. ಹಾಗೆಯೇ ಮಕ್ಕಳನ್ನು ಹಣ ಸಂಪಾದನೆಯ ಯಂತ್ರಗಳನ್ನಾಗಿಸದೆ ಗುಣ ಸಂಸ್ಕೃತಿಯ ಸಂಪತ್ತಾಗಿ ರೂಪುಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.


ಕಂಗ್ವೆ ವಿಶ್ವನಾಥ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವನಿತಾ ಭಾಗವಹಿಸಿದರು. ಶಿಶು ಮಂದಿರದ ಮಾತಾಜಿಗಳಾದ ಚಂದ್ರಾವತಿ, ಚೈತ್ರಾ, ಹಾಗೂ ಕಾಂತಿಮಣಿ ರವರು ವಿವಿಧ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here